ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಪುರಸಭಾ ವ್ಯಾಪ್ತಿಗೆ ಬರುವ ಬಡಾವಣೆಗಳ ರಸ್ತೆಗಳನ್ನು ಹಂತ, ಹಂತವಾಗಿ ಅಭಿವದ್ಧಿ ಪಡಿಸಲಾಗುವುದು ಎಂದು ಶಾಸಕ ಹೆಚ್.ಟಿ ಮಂಜು ಭರವಸೆ ನೀಡಿದರು.
ಪಟ್ಟಣದ ಪುರಸಭಾ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಸಿಮೆಂಟ್ ರಸ್ತೆ ಹಾಗೂ ಒಳಚರಂಡಿಗೆ ಸೇರದಂತೆ ಕಾಮಗಾರಿಗಳಿಗೆ ನಗರೋತ್ತಾನ ಯೋಜನೆಯಡಿಯಲ್ಲಿ 1.8 ಕೋಟಿ ರೂ.ವೆಚ್ಚದ ರಸ್ತೆ ಅಭಿವದ್ಧಿ ಕಾಮ ಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಪ್ರಸ್ತುತ ರಾಜ್ಯದಲ್ಲಿ ರುವ ಕಾಂಗ್ರೆಸ್ ಆಡಳಿತ ಗ್ಯಾರಂಟಿ ಯೋಜನೆಗಳಿಗೆ ಜೋತು ಬಿದ್ದಿದೆ ಆದರೂ ನನ್ನ ಕ್ಷೇತ್ರದ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಿ ಅಗತ್ಯ ಅನುದಾನ ಬಿಡುಗಡೆ ಮಾಡಿಸು ತ್ತಿದ್ದೇನೆ. ಕ್ಷೇತ್ರದ ವ್ಯಾಪ್ತಿಯ ಪಟ್ಟಣ ಹಾಗೂ ಎಲ್ಲ ಗ್ರಾಮೀಣ ಪ್ರದೇಶಗಳ ಅಭಿವದ್ಧಿಗೆ ಶ್ರಮಿಸುತ್ತೇನೆ. ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆರದಾರ ಗುಣಮಟ್ಟದ ಕಾಮಗಾರಿಗೆ ಹೆಚ್ಚು ಒತ್ತು ನೀಡಿಡಬೇಕು. ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಕಾಮಗಾರಿ ಯನ್ನು ಗಮನವಹಿಸಬೇಕು ಎಂದು ಎಚ್ಚರಿಸಿದರೂ.
*ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವ ಶಾಸಕ ನಾನಲ್ಲ*
ಪುರಸಭಾ ಹಿರಿಯ ಸದಸ್ಯ ಕೆ.ಸಿ. ಮಂಜುನಾಥ್ ನನ್ನ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿ ಆಗುತಿದೆ ನನಗೆ ಸಂತೋಷ ಆದರೆ ಈ ವಾರ್ಡಿನ ಜನರಿಂದ ಚುನಾಯಿತ ಪ್ರತಿನಿಧಿಯಾ ಗಿದ್ದೇನೆ ನಮಗೆ ಮಾಹಿತಿ ಇಲ್ಲ ಎಂದು ಬೇಸರ ಹೊರ ಹಾಕಿದ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಶಾಸಕರಾದ *ಹೆಚ್.ಟಿ ಮಂಜು* ನಾನು ಕೂಡ ತಾಲೂಕಿನ ಜನತೆಯ ಆಶೀರ್ವಾದ ದಿಂದ ಒಂದು ಜವಾಬ್ದಾರಿ ಸ್ಥಾನದಲ್ಲಿದ್ದೇನೆ ಇದು ತುರ್ತು ಗುದ್ದಲಿ ಪೂಜೆ ಕಾರ್ಯಕ್ರಮ ವಲ್ಲ ಒಂದು ವಾರದ ಹಿಂದೆಯೇ ಕಾರ್ಯಕ್ರಮ ನಿಗದಿಪಡಿಸಿ ಪುರಸಭಾ ಮುಖ್ಯ ಅಧಿಕಾರಿಗೆ ಖುದ್ದು ನಾನೇ ಕರೆ ಮಾಡಿ ಆ ವ್ಯಾಪ್ತಿಯ ಪುರಸಭಾ ಸದಸ್ಯರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದೇನೆ ಆದರೆ ಆ ಬೇಜವಾಬ್ದಾರಿ ಪುರಸಭಾ ಅಧಿಕಾರಿ ಲೋಪದಿಂದ ನಿಮಗೆ ಮಾಹಿತಿ ತಿಳಿಸಿಲ್ಲವೇನು ಗೊತ್ತಿಲ್ಲ ಆದರೆ ನಾನು ಯಾವುದೇ ಕಾರಣಕ್ಕೂ ಒಬ್ಬ ಜನಪ್ರತಿನಿಧಿಗೆ ಅಗೌರವ ಮಾಡುವ ಮನಸ್ಥಿತಿ ನನಗಿಲ್ಲ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ತಾಲೂಕಿನ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಪಂಕಜಾ ಪ್ರಕಾಶ್,ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್,ಸದಸ್ಯರಾದ ಕೆ.ಸಿ ಮಂಜುನಾಥ್, ಇಂದ್ರಣಿ ವಿಶ್ವನಾಥ್,ಮಾಜಿ ಸದಸ್ಯ ಹೇಮಂತ್ ಕುಮಾರ್,ಮನ್ಮುಲ್ ಮಾಜಿ ನಿರ್ದೇಶಕ ನಂಜುಂಡೇಗೌಡ, ತಾ.ಪಂ ಮಾಜಿ ಸದಸ್ಯ ಜಯರಂಗಣ್ಣ, ಪುರಸಭಾ ಸಹಾಯಕ ಇಂಜಿನಿಯರ್ ಬಸವೇಗೌಡ,ನಾಗೇಶ್,ಯುವ ಮುಖಂಡರಾದ ಸಚಿನ್, ಗಜ ರವಿ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸೇರಿದಂತೆ ಉಪಸ್ಥಿತರಿದ್ದರು
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ