ಜಮೀನಿನ ಟ್ರಾನ್ಸ್ಫರ್ಮರ್ ವಿಚಾರದಲ್ಲಿ ಗಲಾಟೆ: ಕೊಲೆಯಲ್ಲಿ ಫಿನಿಷ್ ಆರೋಪಿಗಳ ಅಂದರ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಜಮೀನಿನಲ್ಲಿದ್ದ ವಿದ್ಯುತ್ ಪರಿವರ್ತಕ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಭದ್ರಾವತಿಯ ದೊಡ್ಡೇರಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಶಾಂತ ಕುಮಾರ (35) ಕೊಲೆಯಾದ ದುರ್ದೈವಿ. ಲೇಪಾಕ್ಷಿ ಎನ್ನುವ ವ್ಯಕ್ತಿ ಹಾಗೂ ಮತ್ತೋರ್ವ ಸೇರಿ ಶಾಂತಕುಮಾರನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜಮೀನಿನಲ್ಲಿದ್ದ ವಿದ್ಯುತ್ ಪರಿವರ್ತಕ ವಿಚಾರಕ್ಕೆ ಬುಧವಾರ ಸಂಜೆ ಜಗಳ ನಡೆದಿತ್ತು. ಗಲಾಟೆ ವಿಪರೀತಕ್ಕೆ ಹೋಗಿ ರಾತ್ರಿ ಮಚ್ಚಿ ನಿಂದ ಹಲ್ಲೆ ಮಾಡಿ ಇಬ್ಬರು ಆರೋಪಿಗಳು ಕೊಲೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು