ಹೆಣ್ಣು ಮಕ್ಕಳಿಗೆ ಆರೋಗ್ಯಕರ ಜೀವನ ಕಷ್ಟಸಾಧ್ಯ: ರೂಪಾ ಪುಣ್ಯಕೋಟಿ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ : ಆರೋಗ್ಯಕರ ಜೀವನ ಹೊಂದುವುದು ಹದಿಹರೆಯದ ಹೆಣ್ಣು ಮಕ್ಕಳಿಗೆ ಕಷ್ಟ ಸಾಧ್ಯ. ಋತು ಚಕ್ರದ ಸಂದರ್ಭದಲ್ಲಿ ವೈಯುಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ವಿದ್ಯಾರ್ಥಿನಿ ಯರಿಗೆ ಅತಿ ಮುಖ್ಯ ಎಂದು ರೋಟರಿ ಜ್ಯೂಬಿಲಿ ಅಧ್ಯಕ್ಷೆ ರೂಪಾ ಪುಣ್ಯ ಕೋಟಿ ಹೇಳಿದರು. 

ರೋಟರಿ ಜಿಲ್ಲೆ 3182 ಜಿಲ್ಲಾ ಅನುದಾನದಲ್ಲಿ ಮಂಜೂರಾಗಿದ್ದ ಅರ್ಥಿಕ ನೆರವಿನಲ್ಲಿ ಬಿ.ಹೆಚ್.ರಸ್ತೆ ಯಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ’ಪ್ಯಾಡ್ ಬರ್ನಿಂಗ್ ಮಿಷನ್’ ಅಳವಡಿಸಿದ್ದನ್ನು ಉದ್ಘಾಟಿಸಿ ಮಾತನಾಡಿದರು.

 ಕಾಲೇಜಿನಲ್ಲಿ ಏಳುನೂರುಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಪದವಿ ಪೂರ್ವ ವಿದ್ಯಾಭ್ಯಾಸ ಮಾಡುತ್ತಿದ್ದು, ಬಹಳಷ್ಟು ಮಕ್ಕಳು ಗ್ರಾಮಾಂತರ ಪ್ರದೇಶದಿಂದ ಬಂದವರಿದ್ದಾರೆ. ಇವರಿಗೆ, ಶುಚಿತ್ವದ ಬಗ್ಗೆ ತಿಳುವಳಿಕೆ ನೀಡಲು ಹಾಗೂ ಉತ್ತಮ ಆರೋಗ್ಯ ಹೊಂದಿ ಹೆಚ್ಚು ಅಂಕಗಳಿಸಲು ಅನುಕೂಲ ಮಾಡಿ ಕೊಡುವ ಸಲುವಾಗಿ ಕಾಲೇಜಿನ ಪ್ರಾಂಶುಪಾಲರು ಅದ್ಯಾಪಕರು, ಪ್ಯಾಡ್ ಬರ್ನಿಂಗ್  ಮಿಷನ್ ಕೊಡಿಸುವಂತೆ ಕೋರಿದ್ದರು. ಅದನ್ನು ನಮ್ಮ ರೋಟರಿ ಜ್ಯೂಬಿಲಿ ಕ್ಲಬ್ ಇಂದು ಪೂರೈಸಿದೆ ಎಂದರು.

ಕಾರ್ಯದರ್ಶಿ ಡಾ.ಪ್ರಕೃತಿ ಮಂಚಾಲೆ ಮಾತನಾಡಿ, ಹದಿಹರೆಯದ ಹೆಣ್ಣು ಮಕ್ಕಳು ಋತುಚಕ್ರದ ವೇಳೆ ವೈಯುಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಗಮನ ಕೊಡಬೇಕು. ಮೂರು-ನಾಲ್ಕು ಗಂಟೆಗೆ ಒಮ್ಮೆ ಪ್ಯಾಡ್ ಬದಲಾಯಿಸಬೇಕು. ಉಪಯೋಗಿಸಿದ ಪ್ಯಾಡ್ ಎಲ್ಲೆಂದ ರಲ್ಲಿ ಎಸೆಯಬಾರದು. ಆದ್ದರಿಂದ ಇಂದು ಈ ಕಾಲೇಜಿಗೆ ಪ್ಯಾಡ್ ಬರ್ನಿಂಗ್ ಮಿಷನ್ ಕೊಡಿಸಿದ್ದೇವೆ. ಅದು ಕೆಲವೇ ಕ್ಷಣಗಳಲ್ಲಿ ಸುಟ್ಟು ಪೂರ್ಣ ಬಸ್ಮ ಮಾಡುವುದು. ಇದರಿಂದ ಹಲವಾರು ಸಂಕಷ್ಟಗಳು ದೂರವಾಗುತ್ತದೆ ಎಂದರು.

ಈ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ನೀರು ಕುಡಿಯಬೇಕು, ನಿಶಕ್ತರಾಗುವು ದನ್ನು ತಡೆಗಟ್ಟಬೇಕು. ಹೆಚ್ಚು ಕಬ್ಬಿಣಾಂಶ ಇರುವ ಧಾನ್ಯ, ಕಾಳು, ಮೊಟ್ಟೆ, ತರಕಾರಿ ಆಹಾರ ದೊಂದಿಗೆ ಸೇವಿಸಬೇಕು, ದೈನಂದಿನ ಚಟುವಟಿಕೆ ಯಾಗಿ ವ್ಯಾಯಾಮ ಮತ್ತು ಯೋಗ ಮಾಡುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ. ಯಾವುದೇ ಸಮಸ್ಯೆ ಕಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದರು.

ರೊ. ಭಾರದ್ವಾಜ ಮಾತನಾಡಿ, ಸರ್ಕಾರಿ ಪದವಿಪೂರ್ವ ಕಾಲೇಜಿಗೆ ನಮ್ಮ ಕ್ಲಬ್ ವತಿಯಿಂದ ಈ ಯಂತ್ರ ಕೊಡುಗೆ ನೀಡಿರುವುದು ಉತ್ತಮ ಕೆಲಸ, ಕಳೆದ ವರ್ಷ ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್. ವಾಗೇಶ್, ನಾಗರಾಜ್, ರೇಣುಕಾ ರಾದ್ಯ, ರಾಜಶೇಖರ್, ಪ್ರಾಂಶುಪಾಲ ಜಯಂತ್.ಎಸ್, ಪ್ರಾಚಾರ್ಯೆ ಭಾರತಿ, ಚಂದ್ರಶೇಖರಪ್ಪ.ಬಿ.ಅರ್, ಗಾಯತ್ರಿ. ಎಂ, ಇಂದಿರಾ, ಗೀತಾ ಕೆ.ಸಿ.ರಾಧಾ ಮಣಿ. ಎಂ.ಎನ್ ಹಾಗೂ ವಿದ್ಯಾರ್ಥಿ ನಿಯರು ಪಾಲ್ಗೊಂಡಿದ್ದರು.

ರೋಟರಿಯಿಂದ ಆರೋಗ್ಯದಾಯಕ ಹಲವಾರು ಕಾರ್ಯಕ್ರಮಗಳು ವಿಶ್ವಾದ್ಯಂತ ವರ್ಷ ಪೂರ್ಣ ಜರುಗುತ್ತವೆ. ಇದಕ್ಕೆ ರೋಟರಿ ಸದಸ್ಯರು ಮಾತ್ರವಲ್ಲದೆ ಜನ ಸಾಮಾನ್ಯರು ಉದಾರ ದೇಣಿಗೆ ನೀಡಬಹುದು. ಅದು ಸದ್ವಿನಿಯೊಗ ವಾಗುತ್ತದೆ.
* ಜಿ.ವಿಜಯಕುಮಾರ್, ಮಾಜಿ ಅಸಿಸ್ಟೆಂಟ್ ಗವರ್ನರ್*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು