ಮದ್ಯದಂಗಡಿಗೆ ಕಟ್ಟಡ ಬಾಡಿಗೆ ಕೊಟ್ಟ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮದ್ಯದ ಅಂಗಡಿಗೆ ಕಟ್ಟಡ ಬಾಡಿಗೆ ಕೊಟ್ಟಿದಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಕುಟುಂಬವೊಂದನ್ನು ಬಹಿಷ್ಕಾರ ಹಾಕಿದ ಘಟನೆವೊಂದು ತಾಲೂಕಿನ ತಟ್ಟೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಹಿಷ್ಕಾರ ಹಾಕಿದ ಕುಟುಂಬಸ್ಥರನ್ನು ಮಾತನಾಡಿಸಿದರೆ 5 ಸಾವಿರ ದಂಡ ಕಟ್ಟಿಬೇಕು ಎಂಬ ನಿಯಮವನ್ನೂ ಗ್ರಾಮ ದಲ್ಲಿ ಜಾರಿಗೆ ತರಲಾಗಿದೆ.

ತಟ್ಟೆಹಳ್ಳಿ ಗ್ರಾಮದ ಮಂಜೋಜಿರಾವ್ ಎಂಬುವರಿಗೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು 27 ವರ್ಷಕ್ಕೆ ಜಾಗ ಲೀಜ್ ಪಡೆದು ಮದ್ಯದ ಅಂಗಡಿ ತೆರೆದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಊರಿನ ಮುಖಂಡರು ಮಂಜೋಜಿರಾವ್ ಕುಟುಂಬಕ್ಕೆ ಊರಿಂದ ಬಹಿಷ್ಕಾರ ಹಾಕಿದ್ದಲ್ಲದೇ ಅವರ ಕುಟುಂಬ ದವರ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ 5 ಸಾವಿರ ದಂಡ ವಿಧಿಸಿದ್ದಾರೆ. ಇದೀಗ ನಮಗೆ ನ್ಯಾಯ ಕೊಡಿಸಿ, ಕುಟುಂಬಕ್ಕೆ ಆದ ಬಹಿಷ್ಕಾರಕ್ಕೆ‌ ಮುಕ್ತಿ ಕೊಡಿಸಿ ಎಂದು ಮಂಜೋಜಿರಾವ್‌ ಜಿಲ್ಲಾಧಿಕಾರಿಗೆ ಮುಂದೆಯೂ ಆಳಲು ತೋಡಿಕೊಂಡಿದ್ದಾರೆ.

ಮಂಜೋಜಿರಾವ್ ಅವರದ್ದೇ ಸಮುದಾಯದ ಐದಾರು ಮುಖಂಡರು ಬಹಿಷ್ಕಾರ ಹಾಕಿದ್ದಾರೆ. ಈ ಕುಟುಂಬ ತಮ್ಮ ಸಮುದಾಯವರ ಮನೆಗಳಿಗೆ ಹೋಗುವ ಹಾಗಿಲ್ಲ. ಶುಭ ಸಮಾರಂಭಕ್ಕೆ ಬರುವ ಹಾಗಿಲ್ಲ, ದೇವಸ್ಥಾನ ಪೂಜೆಗೆ ಹೋದರೆ ಪೂಜಾರಿ ಪೂಜೆ ಮಾಡುವುದಿಲ್ಲ ಎಂದು ಮಂಜೋಜಿರಾವ್‌ ಅಳಲು ತೋಡಿಕೊಂಡಿದ್ದಾರೆ.

ಮಗನ ಪರಿಸ್ಥಿತಿ ಕಂಡು ಮಂಜೋಜಿ ರಾವ್ ತಾಯಿ ಕಣ್ಣೀರಿಡುತ್ತಿದ್ದಾರೆ. ಈ ಕುಟುಂಬ ವನ್ನು ಮಾತನಾಡಿಸಿದಕ್ಕೆ ವ್ಯಕ್ತಿಯೊಬ್ಬರಿಗೆ ಈಗಾಗಲೇ ಐದು ಸಾವಿರ ದಂಡ ಹಾಕಿದ್ದಾರೆ.

ಇದನ್ನೆಲ್ಲ ನಡೆಸಬಾರದು ಕೂಡಲೇ ಆ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು