ಭದ್ರಾವತಿಯಲ್ಲಿ ಬಂದ್‌ ಗೆ ಬೆಂಬಲ ಇಲ್ಲ: ಎಲ್ಲವೂ ಯಥಾಸ್ಥಿತಿ

ವಿಜಯ ಸಂಘರ್ಷ 

ಭದ್ರಾವತಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಕರ್ನಾಟಕ ಬಂದ್ ಗೆ ಭದ್ರಾವತಿಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. 

ಶನಿವಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಸೇರಿ ವಿವಿಧ ಸಂಘಟನೆಗಳು ನೀಡಿದ್ದ ಬಂದ್‌ ಕರೆಗೆ ತಾಲೂಕಿನಲ್ಲಿ ಯಾವುದೇ ಒಂದು ಸಂಘಟನೆಯೂ ಬೆಂಬಲ ವ್ಯಕ್ತಪಡಿಸಿಲ್ಲ. 

ಕೆಎಸ್ ಆರ್ ಟಿಸಿ, ಖಾಸಗಿ ಬಸ್‌ ಸಂಚಾರ ಯಥಾಸ್ಥಿತಿಯಲ್ಲಿ ಸಂಚರಿಸಿದವು. ಆಟೋ, ಕಿರಾಣಿ, ದಿನಸಿ ಸೇರಿ ಜನಜೀವನ ಎಂದಿನಂತಿದೆ. ಶಾಲಾ/ ಕಾಲೇಜು, ಅಂಗಡಿ ಮುಗ್ಗಟ್ಟುಗಳು ಕೂಡಾ ಎಂದಿನಂತೆ ಇವೆ. ಯಾವುದೇ ಅಹಿತಕರ ಘಟನೆಗಳು ನಡೆಯ ದಂತೆ ಪೊಲೀಸ್ ಹಾಗೂ ಗೃಹರಕ್ಷಕ ದಳ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು