ಫಾಸ್ಟರ್ ಪ್ರವೀಣ್ ಪಗಡಾಲ ರವರ ಸಾವು ಸಿಬಿಐ ತನಿಖೆಗೆ ಒಪ್ಪಿಸಲಿ: ಕ್ರೈಸ್ತ ಮುಖಂಡರಿಂದ ಆಗ್ರಹ

ವಿಜಯ ಸಂಘರ್ಷ 
ಭದ್ರಾವತಿ : ನೆರೆ ರಾಜ್ಯ ಅಂಧ್ರ ಪ್ರದೇಶದ ರಾಜಮಂಡ್ರಿ ಫಾಸ್ಟರ್ ಪ್ರವೀಣ್ ಪಗಡಾಲ ರವರ ಸಾವಿನ ಕುರಿತು ಸಿ.ಬಿ.ಐ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಅಖಿಲ ಭಾರತ ಕ್ರೈಸ್ತ ಮಹಾಸಭಾವತಿಯಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಲಾಯಿತು.

ಬುಧವಾರ ತಹಸೀಲ್ದಾ‌ರ್ ಕಚೇರಿ ಮುಂಭಾಗ ಜಮಾಯಿಸಿದ ಕ್ರೈಸ್ತ ಮುಖಂಡರು,ದೇಶದಲ್ಲಿ ಅನೇಕ ಧರ್ಮಗಳ ನಡುವೆ ಅಲ್ಪಸಂಖ್ಯಾತ ರೆಂಬ ಶಿರೋನಾಮೆಯೊಂದಿಗೆ ಕ್ರೈಸ್ತರು ಪ್ರೀತಿ, ಸೌಹಾರ್ದತೆ, ಸಾಮ್ಯ ರಸ್ಯಗಳಿಂದ ಕೂಡಿ ಬದುಕುತ್ತಿದ್ದೇವೆ. ಅಲ್ಲದೆ ದೇಶಕ್ಕೆ ನಮ್ಮದೇ ಆದ ಕೊಡುಗೆಗಳನ್ನು ನೀಡಿದ್ದೇವೆ ಎಂದರು.

ಆಂಧ್ರ ಪ್ರದೇಶದ ರಾಜಮಂಡ್ರಿ ಫಾಸ್ಟರ್ ಪ್ರವೀಣ್ ಪಗಡಾಲರವರು ದೇವರ ಸೇವಕರು ಮತ್ತು ಸ್ವಂತ ಸಾಫ್ಟ್‌ವೇರ್ ಕಂಪನಿ ಮುನ್ನಡೆ ಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಹಲವಾರು ಸಾಮಾಜಿಕ ಕಾರ್ಯ ಗಳೊಂದಿಗೆ ಸಮಾಜ ಸೇವಕ ರಾಗಿದ್ದಾರೆ. 

ಆಂಧ್ರ ಪ್ರದೇಶ ಸರ್ಕಾರ ಯಾವುದೇ ಸಾಕ್ಷಿ ಇಲ್ಲದೆ ಇವರ ಸಾವು ಅಪಘಾತ ಎಂದು ಪರಿಗಣಿಸಿದೆ. ಆದರೆ ಇವರ ಸಾವು ಹಲವಾರು ಅನುಮಾನದಿಂದ ಕೂಡಿದೆ ಎಂದು ಆರೋಪಿಸಿದರು.

ಪ್ರವೀಣ್ ಪಗಡಾಲರವರ ಸಾವಿನ ಸತ್ಯಾಂಶ ಹೊರಬರಬೇಕು. ಅವರ ಕುಟುಂಬಕ್ಕೂ ಮತ್ತು ಕ್ರೈಸ್ತರಿಗೂ ನ್ಯಾಯ ದೊರಕಿಸಿ ಕೊಡಬೇಕು. ದೇಶದಲ್ಲಿ ಅಲ್ಪ ಸಂಖ್ಯಾತರಾ ಗಿರುವ ಕ್ರೈಸ್ತರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಆರ್ ಸುರೇಶ್ ನಾಯ್ಕ ನೇತೃತ್ವದಲ್ಲಿ ಮನವಿ ಸಲ್ಲಿಸ ಲಾಯಿತು.ನಗರಸಭೆ ಸದಸ್ಯ ರಾದ ಜಾರ್ಜ್, ಐ.ವಿ ಸಂತೋಷ್ ಕುಮಾರ್, ಮಾಜಿ ಸದಸ್ಯರಾದ ಫ್ರಾನ್ಸಿಸ್, ಸ್ಟಿಫನ್, ಸೂಡಾ ಸದಸ್ಯ ಎಚ್. ರವಿಕುಮಾರ್, ವಿವಿಧ ಕ್ರೈಸ್ತ ಸಂಘಟನೆಗಳ ಪ್ರಮುಖರಾದ ಫಾಸ್ಟರ್ ರೈಮಂಡ್, ಸೆಲ್ವರಾಜ್, ಆರ್. ಮೋಸಸ್, ವಿಲ್ಸನ್‌ಬಾಬು, ದಾಸ್, ಸ್ಪೀಫನ್, ಕಾಕನಿ ಪ್ರಕಾಶ್, ಅಂತೋಣಿ ಪ್ರಕಾಶ್, ಸ್ಯಾಮುವೆಲ್ ಜೇಮ್ಸ್, ಕೃಪಾ ಮೇರಿ ಮತ್ತು ಶೈನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ನಂತರ ತಹಸೀಲ್ದಾರ್ ಪರಸಪ್ಪ ಕುರುಬರ ರವರ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು