ಭದ್ರಾವತಿ-ಏ:2 ರಂದು ಕರೆಂಟ್ ಇರಲ್ಲ: ಎಲ್ಲೆಲ್ಲಿ ನೋಡಿ..?

ವಿಜಯ ಸಂಘರ್ಷ 
ಭದ್ರಾವತಿ: ಮೆಸ್ಕಾಂ ನಗರ ಉಪವಿಭಾಗ, ಘಟಕ-3 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಂಡಿರುವುದರಿಂದ ಏ.2 ರ ಬುಧವಾರ ಬೆಳಿಗ್ಗೆ 9:30 ಘಂಟೆಯಿಂದ ಸಂಜೆ 5.30 ಘಂಟೆ ಯವರೆಗೆ ವಿದ್ಯುತ್ ಅಡಚಣೆ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ನಗರ ವ್ಯಾಪ್ತಿಯ ಜನ್ನಾಪುರ, ಹುತ್ತ ಕಾಲೋನಿ, ಅಪ್ಪರ್ ಹುತ್ತ, ಜಿಂಕ್‌ ಲೈನ್ ವೇಲೂರು ಶೆಡ್, ಭಂಡಾರಹಳ್ಳಿ ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ, ಗ್ರಾಹಕರು ಸಹಕರಿಸಲು ಕೋರಿದೆ,

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು