ಭದ್ರಾವತಿ-ಸಂಜೀವ ರಾವ್ ಶಿಂಧೆಗೆ ಛಾಯಶ್ರೀ ಪ್ರಶಸ್ತಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ಛಾಯಾಗ್ರಾಹಕ ಸಂಜೀವ ರಾವ್ ಶಿಂಧೆ ಇವರಿಗೆ ಕೆಪಿಎ ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಸ್ಥೆಯಿಂದ ಛಾಯಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ಸುಮಾರು 30 ವರ್ಷಗಳಿಂದ ಛಾಯಾ ಗ್ರಾಹಕ ವೃತ್ತಿಯನ್ನು ನಿರ್ವಹಿಸಿಕೊಂಡು ಬಂದಿರುವ ಶಿಂಧೆ ತಾಲೂಕು ಛಾಯಾ ಗ್ರಾಹಕರ ಸಂಘದಲ್ಲಿ ಆರು ಬಾರಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ರುತ್ತಾರೆ. ಶಿವಮೊಗ್ಗ ಜಿಲ್ಲಾ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷರಾಗಿ ಒಂಬತ್ತು ವರ್ಷಗಳು ಕಾಲ ಕಾರ್ಯ ನಿರ್ವಹಿಸಿರುವ ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಸ್ಥೆಯು ಚಾಯ ಶ್ರೀ ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ. 

ಪ್ರಶಸ್ತಿಗೆ ಬಾಜನರಾದ ಸಂಜೀವ ರಾವ್ ಶಿಂಧೆರವರಿಗೆ ಶಿವಮೊಗ್ಗ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀನಿವಾಸ್ ಅಭಿನಂದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು