ವಿಜಯ ಸಂಘರ್ಷ ನ್ಯೂಸ್
ಹುಣಸಗಿ: ತಾಲೂಕಿನ ಕೊಡೇಕಲ್ ಗ್ರಾಮದ ನಿಜಲಿಂಗಪ್ಪ ಗುಡಿ ಸಮೀಪ,ಇಸ್ಪೀಟ್ ಆಟ ಆಡುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
13 ಜನರ ತಂಡ 58800/-ರೂ.ನಗದು ಹಣ ಪಣಕ್ಕಿಟ್ಟು ಕೊಡೇಕಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ 9 ಜನ ಸ್ಥಳದಿಂದ ಒಟ್ಟು ನಗದು ಹಣ 28160/-ರೂ, ಒಟ್ಟು 86,960 ಹಣ ಮತ್ತು 22 ಜನರನ್ನು ಬಂಧಿಸಿದ್ದಾರೆ.
ಎಸ್.ಪಿ. ಪೃಥ್ವಿಕ್ ಶಂಕರ್, ಡಿ.ಎಸ್.ಪಿ ಜಾವೀದ್ ಇನಾಮ್ದಾರ್ ಹಾಗೂ ಸಿಪಿಐ ರವಿಕುಮಾರ ಎಸ್.ಎನ್ ಹುಣಸಗಿ ಮಾರ್ಗದರ್ಶನದ ಮೇರೆಗೆ. ಪಿ.ಎಸ್.ಐ. ಅಯ್ಯಪ್ಪ ನೇತೃತ್ವದ ತಂಡ ದಾಳಿ ನಡೆಸಿಬಂಧಿಸಲಾಗಿದೆ.
ಈ ಸಂಬಂಧ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ನಂ.64 ಹಾಗೂ 65/2025 ಕಲಂ.87 ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ .