ಪುರಾತನ ದೇವಾಲಯದ ಮೇಲೆ ಬೆಳದು ನಿಂತ ಗಿಡಗಳ ತೆರವು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹಳೇನಗರದ ಪುರಾತನ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಗೋಪುರಗಳ ಮೇಲೆ ಎಲ್ಲೆಂದರಲ್ಲಿ ಯಥೇಚ್ಛವಾಗಿ, ಹುಲುಸಾಗಿ ಬೆಳೆದು ಬೇರುಬಿಟ್ಟಿದ್ದ ಅರಳಿಗಿಡಗಳನ್ನು ಭಾನುವಾರ ಆರ್ಕಲಾಜಿ ಕಲ್ ಇಲಾಖೆ ಸಿಬ್ಬಂದಿ ಗಳು ತೆರವುಗೊಳಿಸಿದರು. 

ಮುಜರಾಯಿ ಇಲಾಖೆ ಗಿಡಗಳನ್ನು ಕೀಳಿಸದೆ ದೇವಾಲಯದ ಸಂರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ ಎಂದು ಮಾದ್ಯಮಗಳು ವರದಿ ಮಾಡಿದ್ದವು. ಆರ್ಕಲಾಜಿಕಲ್ ಇಲಾಖೆಯ ಸಿಬ್ಭಂದಿಗಳು ದೇವಾಲಯದ ಮೇಲೆ ಬೆಳೆದಿದ್ದ ಗಿಡಗಳನ್ನು ಕಿತ್ತು ದೇವಾಲಯದ ಸಂರಕ್ಷಣೆ ಇಲಾಖೆಯ ಹೋಣೆ ಎಂಬುದನ್ನು ಅರಿತು ಕೆಲಸಮಾಡಿದೆ.

ಕೈಜೋಡಿಸಿದ ಸಾರ್ವಜನಿಕರು: 

ದೇವಾಲಯದ ಮೇಲೆ ಬೆಳಿದಿದ್ದ ಅರಳಿಗಿಡ ಗಳನ್ನು ಕೀಳುವ ಕಾರ್ಯದಲ್ಲಿ ಇಲಾಖೆಯು ತನ್ನ ಸಿಬ್ಭಂದಿಗಳಾದ ರಾಂಪ್ರಕಾಶ್, ನಾರಾಯಣಪ್ಪ ಅವರನ್ನು ಕಳುಹಿಸಿತ್ತು. ಸಿಬ್ಬಂದಿಗಳೊoದಿಗೆ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಮಾರುತಿ, ಮಾಜಿ ಸದಸ್ಯ ವಿಶ್ವನಾಥ್, ಸ್ಥಳೀಯ ರಾದ ನರಸೆಗೌಡ, ಸುಬ್ರಹ್ಮಣ್ಯ , ವೈಶಾಖ್, ನಿಖಿಲ್,ಹರ್ಷ,ಪ್ರವೀಣ್ ಅವರು ಗಳು ಭಾಗಿಯಾಗಿ ಗಿಡಗಳನ್ನು ಕಿತ್ತು ಬೇರಿಗೆ ರಾಸಾಯನಿಕ ಔಷಧಿ ಸಿಂಪಡಿಸುವ ಕಾರ್ಯ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು