ಭದ್ರಾವತಿ-ದೇವಾಲಯದ ಬಾಗಿಲು ತೆಗೆದ ಅರ್ಚಕರಿಗೆ ಕಾದಿತ್ತು ಶಾಕ್..?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ 700 ವರ್ಷದ ಪುರಾತನ ದೇವಸ್ಥಾನದ ಗ್ರಿಲ್​ ಕಟ್​ ಮಾಡಿ ಕಾಣಿಕೆ ಹುಂಡಿಯನ್ನು ಕದ್ದಿರುವ ಘಟನೆ ಶನಿವಾರ ರಾತ್ರಿ ಹಳೇನಗರದ ಭೂತನಗುಡಿಯಲ್ಲಿ ನಡೆದಿದೆ.

ಸುಮಾರು ಮೂರು ವರ್ಷದಿಂದ ಕಾಣಿಕೆ ಹಣ ಎಣಿಕೆ ಮಾಡದ ಹುಂಡಿಯನ್ನೇ ಕಳ್ಳರು ದೇವಾಲಯದ ಗ್ರಿಲ್​​​​ ಕಟ್​​​​​​ ಮಾಡಿ ಒಳಗೆ ನುಗ್ಗಿ ಕದ್ದೊಯ್ದಿದ್ದಾರೆ. ಹುಂಡಿಯಲ್ಲಿ ಲಕ್ಷಾಂತರ ರೂ.ಹಣ ಇತ್ತು ಎನ್ನಲಾಗಿದೆ.

ಭಾನುವಾರ ಬೆಳಗ್ಗೆ ದೇವಾಲಯಕ್ಕೆ ಅರ್ಚಕರು ಬಂದಾಗ ದೇವಾಲಯದ ಒಳಗಿನ ಹುಂಡಿಯ ಬೀಗ ಒಡೆದಿರು ವುದು ಕಂಡು ಬಂದಿದೆ. ನಂತರ ಗೋಡೆಯ ಗ್ರಿಲ್​ ಕಟ್ ಮಾಡಿದ್ದು ಗಮನಕ್ಕೆ ಬಂದಿದೆ. ತಕ್ಷಣ ದೇವಾಲಯದ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು, ಆಡಳಿಯ ಮಂಡಳಿಯವರು ಹಳೇನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ದೇವಾಲಯವನ್ನು ಪರಿಶೀಲಿ ಸಿದ್ದು, ಫಿಂಗರ್​​ ಪ್ರಿಂಟ್​​ ಹಾಗೂ ಶ್ವಾನದಳ ವನ್ನು ಕರೆಸಿ ಶೋಧ ಕಾರ್ಯ ನಡೆಸಿದ್ದಾರೆ. ಇದು ಜನನಿಬಿಡ ರಸ್ತೆಯಾಗಿದ್ದು ಇಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಅಚ್ಚರಿ ತಂದಿದೆ. ಈ ದೇವಾಲಯದಲ್ಲಿ ಭೂತಪ್ಪ, ಗಣಪತಿ ಹಾಗೂ ಶನಿ ದೇವರ ಮೂರ್ತಿಗಳಿವೆ. ಇದೇ ಮೊದಲ ಬಾರಿಗೆ ದೇವಾಲಯದಲ್ಲಿ ಕಳ್ಳತನ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು