ಭದ್ರಾವತಿ-ಜಾನಪದ ಜನರಿಂದ ಜನರಿಗಾಗಿ ಇರುವ ಕಲೆ:ಡಾ.ಕೃಷ್ಣ ಎಸ್.ಭಟ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಜಾನಪದ ಜನರಿಂದ ಜನರಿಗಾಗಿ ಇರುವ ಕಲೆ. ಇದೊಂದು ಅದ್ಭುತ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನಗರದ ಭೂಮಿಕಾ ವೇದಿಕೆ ಅಧ್ಯಕ್ಷ ಡಾ.ಕೃಷ್ಣ ಎಸ್. ಭಟ್ ಹೇಳಿದರು.

ನಗರದ ಭೂಮಿಕಾ ವೇದಿಕೆ ವತಿ ಯಿಂದ ಆಯೋಜಿ ಸಲಾಗಿದ್ದ ಜಾನಪದ ವೈಭವ ಚೌಡಿಕೆ ಗೊಂದಲಿಗರ ಪದ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಾನಪದಕ್ಕೆ ತನ್ನದೇ ಆದ ಮಹತ್ವವಿದೆ. ಕನ್ನಡನಾಡಿನ ಶ್ರೀಮಂತ ಕಲೆಗಳಲ್ಲಿ ಒಂದಾಗಿದೆ. ಇಂದಿನ ಯುವ ಸಮುದಾಯಕ್ಕೆ ಜಾನಪದ ಮಹತ್ವ ತಿಳಿಸಿಕೊಡುವ ಅಗತ್ಯ ವಿದೆ ಎಂದರು.

ಚೌಡಿಕೆ ಕಲಾವಿದ ಲಕ್ಷಣರಾವ್ ಭೋರತ್‌ ರವರ ತಂಡದಿಂದ ನಡೆದ `ಚೌಡಿಕೆ ಗೊಂದಲಿಗರ ಪದ' ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಮುನಿರಾಜ್, ಪುಷ್ಪ ತಂಡದವರು ಪ್ರಾರ್ಥಿಸಿ, ಶೋಭಾ ಸ್ವಾಗತಿಸಿ, ರೂಪರಾವ್ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಕವಿ, ಸಾಹಿತಿ ಡಾ.ಎಚ್.ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು