22 ಜನ ಪ್ರಯಾಣಿಕರ ಪ್ರಾಣ ಉಳಿಸಿದ : ಚಾಲಕ ಮೈಹೇಬೂಬ್

ವಿಜಯ ಸಂಘರ್ಷ ನ್ಯೂಸ್ 
ಲಿಂಗಸಗುರ: ಘಟಕದ ಕೆ.ಎಸ್.ಆರ್. ಟಿ.ಸಿ. ಬಸ್ ಲಿಂಗಸಗೂರ ನಿಂದ ಮುದ್ದೇಬಿಹಾಳ ಹೋಗುವಾಗ ನಾರಾಯಣಪುರ ಸಮೀಪ ಅನಾಹುತ ತಪ್ಪಿಸಿದ್ದಾರೆ ಚಾಲಕ ಮೈಹೇಬೂಬ್  

ಲಿಂಗಸಗುರ ನಿಂದ ಮುದ್ದೇಬಿಹಾಳ ಸುಮಾರು 22 ಜನ ಪ್ರಯಾಣಿಕರನ್ನು ಹೊತ್ತ ಎನ್ ಈ ಕೆ ಎಸ್ ಆರ್ ಟಿಸಿ ಬಸ್ಸನ ಸ್ಟೆರಿಂಗ್ ಏಕಾ ಏಕಿ ಕಟ್ಟಾಗಿದ್ದು ಚಾಲಕನ ತಕ್ಷಣಕ್ಕೆ ಬಲಕ್ಕೆ ತಿರುಗಿಸಿ ಬಾರಿ ಅನಾಹುತ ತಪ್ಪಿಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.

ಅಪಘಾತದಲ್ಲಿ ಪ್ರಾಣ ಹಾನಿ ಆಗದೆ ಇರೋದು ಅದೃಷ್ಟ ಎಂದು ಪ್ರಯಾಣಿಕರು ನಿಟ್ಟಿಸುರು ಬಿಟ್ಟಿದ್ದಾರೆ.

ಈ ಅಪಘಾತದಲ್ಲಿ ನಿರ್ವಾಹಕ ಶಂಕರ್ ಗೌಡರಿಗೆ ಎಡ ಕಾಲಿನಲ್ಲಿ ಪೆಟ್ಟು ಹಾಗೂ ಒಬ್ಬ ಹಿರಿಯ ವ್ಯಕ್ತಿಯ ಎಡ ಕಣ್ಣಿನ ಮೇಲಭಾಗಕ್ಕೆ ಒಂದು ದೊಡ್ಡ ಗಾಯ ಆಗಿರೋದು ಬಿಟ್ರೆ ಏನು ಅನಾಹುತ ಆಗಿಲ್ಲಾ ಎಂದು ನಾರಾಯಣಪುರ ಠಾಣಾ ಪೋಲಿಸರು ಮಾಹಿತಿ ನೀಡಿದ್ದಾರೆ.

ತಕ್ಷಣ ಪ್ರಯಾಣಿಕರಿಗೆ ಬೇರೆ ಬಸ್ಸನ ವ್ಯವಸ್ಥೆ ಮಾಡಿ ಕಳಿಸಿಕೊಡಲಾಗಿದೆ.

ಜಿಲ್ಲಾ ವರದಿಗಾರ : ✍️ಶಿವು ರಾಠೋಡ ಯಾದಗಿರಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು