ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸಾದತ್ ಕಾಲೋನಿಯ ವ್ಯಕ್ತಿ ಯೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರು ಬರೋಬ್ಬರಿ 5.70 ಲಕ್ಷ ರೂ ದೋಚಿರುವ ಘಟನೆ ನಡೆದಿದೆ.
ಮೊಬೈಲ್ಗೆ ಬಂದ ಕೇವಲ ಎರಡು ಮೆಸೇಜ್ಗಳ ಮೂಲಕ ಓಟಿಪಿ ಕೇಳದೆಯೇ ಹಣ ಪಡೆದಿದ್ದಾರೆ.
ಫೋನ್ಗೆ HDFC ಬ್ಯಾಂಕ್ ನ ಎರಡು ಟೆಕ್ಸ್ಟ್ ಮೇಸೇಜ್ ಬಂದಿದ್ದವು. ಅದನ್ನು ದೂರುದಾರರು ಓಪನ್ ಮಾಡಿದಾಗ ಶಾಕ್ ಎದುರಾಗಿತ್ತು.ಬ್ಯಾಂಕ್ನಿಂದ 5 ,70,000 ರೂಪಾಯಿ ಹಣ ಡೆಬಿಟ್ ಆಗಿತ್ತು. ಆದರೆ ಯಾರಿಗೂ ಹಣ ಹಾಕದ ದೂರುದಾರರು ಗಾಬರಿಯಿಂದ ಬ್ಯಾಂಕ್ನಲ್ಲಿ ಹೋಗಿ ವಿಚಾರಿಸಿದಾಗಲೂ ಸಹ ಬ್ಯಾಂಕ್ ಸಿಬ್ಬಂದಿ ನಿಮ್ಮ ಖಾತೆಯಿಂದ ಹಣ ಕಟ್ ಆಗಿದೆ ಎಂದು ಹೇಳಿದ್ದರು.
ಇದರಿಂದ ದೂರುದಾರರಿಗೆ ಯಾರೋ ತಮ್ಮ ವಯಕ್ತಿಕ ಖಾತೆಯನ್ನು ಹ್ಯಾಕ್ ಮಾಡಿ ಮೊಬೈಲ್ಗೆ ಒಟಿಪಿಯನ್ನೂ ಕಳುಹಿಸದೆ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿ ಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.