ಭದ್ರಾವತಿ-ಮೊಬೈಲ್‌ಗೆ ಮೆಸೇಜ್: ಒಟಿಪಿ ಹೇಳದೇನೆ ಹೋಯ್ತು ಹಣ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸಾದತ್ ಕಾಲೋನಿಯ ವ್ಯಕ್ತಿ ಯೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರು ಬರೋಬ್ಬರಿ 5.70 ಲಕ್ಷ ರೂ ದೋಚಿರುವ ಘಟನೆ ನಡೆದಿದೆ. 

ಮೊಬೈಲ್‌ಗೆ ಬಂದ ಕೇವಲ ಎರಡು ಮೆಸೇಜ್‌ಗಳ ಮೂಲಕ ಓಟಿಪಿ ಕೇಳದೆಯೇ ಹಣ ಪಡೆದಿದ್ದಾರೆ.

ಫೋನ್​ಗೆ HDFC ಬ್ಯಾಂಕ್ ನ ಎರಡು ಟೆಕ್ಸ್ಟ್​ ಮೇಸೇಜ್​ ಬಂದಿದ್ದವು. ಅದನ್ನು ದೂರುದಾರರು ಓಪನ್​ ಮಾಡಿದಾಗ ಶಾಕ್​ ಎದುರಾಗಿತ್ತು.ಬ್ಯಾಂಕ್​ನಿಂದ 5 ,70,000 ರೂಪಾಯಿ ಹಣ ಡೆಬಿಟ್ ಆಗಿತ್ತು. ಆದರೆ ಯಾರಿಗೂ ಹಣ ಹಾಕದ ದೂರುದಾರರು ಗಾಬರಿಯಿಂದ ಬ್ಯಾಂಕ್​ನಲ್ಲಿ ಹೋಗಿ ವಿಚಾರಿಸಿದಾಗಲೂ ಸಹ ಬ್ಯಾಂಕ್​ ಸಿಬ್ಬಂದಿ ನಿಮ್ಮ ಖಾತೆಯಿಂದ ಹಣ ಕಟ್​ ಆಗಿದೆ ಎಂದು ಹೇಳಿದ್ದರು.

ಇದರಿಂದ ದೂರುದಾರರಿಗೆ ಯಾರೋ ತಮ್ಮ ವಯಕ್ತಿಕ ಖಾತೆಯನ್ನು ಹ್ಯಾಕ್​ ಮಾಡಿ ಮೊಬೈಲ್​ಗೆ ಒಟಿಪಿಯನ್ನೂ ಕಳುಹಿಸದೆ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿ ಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು