ವಿಜಯ ಸಂಘರ್ಷ ನ್ಯೂಸ್
ಸಾಗರ: ಗ್ರಾಮಗಳು ಅಭಿವೃದ್ಧಿಯಾಗ ಲೆಂದು ಸರ್ಕಾರಗಳು ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತವೆ. ಆದರೆ ಗ್ರಾಮಗಳು ಮಾತ್ರ ಇನ್ನೂ ವರೆಗೂ ಅಭಿವೃದ್ಧಿ ಆಗುವ ಲಕ್ಷಣಗಳು ಕಾಣುತ್ತಿಲ್ಲ,
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಚಿಪ್ಪಳಿ ಗ್ರಾಮದ ಗ್ರಾಮಸ್ಥರು ಮೂಲಸೌಲಭ್ಯಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ ದಿಂದ ಸಾಗರ ಹೋಗು ವಾಗ ಮಧ್ಯದಲ್ಲಿ ಹೊಸಗುಂದ ದೇವಸ್ಥಾನಕ್ಕೆ ಹೋಗುವ ರಸ್ತೆ ದಾಟಿ ಸ್ವಲ್ಪ ಮುಂದೆ ಹೋದರೆ ಅರಣ್ಯ ಇಲಾಖೆಯ ಒಂದು ಮನೆ ಇದೆ ಮನೆಯ ಎದುರುಗಡೆ ಸಣ್ಣದಾಗಿ ಎನ್ನುವ ಬೋರ್ಡ್ ಕಾಣುತ್ತದೆ ಆ ಬೋರ್ಡನ್ನು ಮುಂದೆ ಒಂದು ಮಣ್ಣಿನ ರಸ್ತೆಯನ್ನು ನಾವು ನೋಡುತ್ತೇವೆ ಆ ರಸ್ತೆಯಲ್ಲಿ ಚಿಪ್ಪಳ್ಳಿಗೆ ಹೋಗಬೇಕು ಸ್ವಲ್ಪ ದೂರದ ತನಕ ಜಲ್ಲಿಕಲ್ಲು ಹಾಕಿದ ಗುಂಡಿ ಬಿದ್ದ ರಸ್ತೆ ಕಾಣುತ್ತದೆ ದಟ್ಟವಾದ ಕಾಡಿನ ನಡುವೆ ಈಗಲೂ ಗುಂಡಿ ಕೆಸರು ರಸ್ತೆಯಲ್ಲಿ ಚಿಪ್ಪಳ್ಳಿಗೆ ಹೋಗಬೇಕು.
ಚಿಪ್ಪಳ್ಳಿಯಲ್ಲಿ ಪ್ರಾಥಮಿಕ ಶಾಲೆ 4ನೇ ತರಗತಿ ತನಕ ಇತ್ತು.ಆದರೆ ಕಳೆದ ಮೂರು ವರ್ಷಗಳ ಹಿಂದೆ ಅದು ಸಹ ಮುಚ್ಚಿದೆ ಸರಿ ಸುಮಾರು 30 ಮನೆಗಳ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹರ ಸಹಸಪಟ್ಟು ಶಾಲೆಗೆ ಹೋಗಬೇಕಾ ಗಿದೆ. ಶಾಲೆಗೆ ಹೋಗಲು ಹೆದರಿಕೆ ಯಾಗುತ್ತದೆ. ಕಾರಣ ಬ್ರಿಡ್ಜ್ಅನ್ನ ಸೇತುವೆಯನ್ನು ದಾಟಿ ಹೋಗಬೇಕು ಅಪ್ಪ ಇದ್ದರೆ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಆದರೆ ಬೈಕ್ ಓಡಾಡು ವನು ಕಷ್ಟ ಆಗುತ್ತಿದೆ ರಸ್ತೆ ಸರಿ ಇಲ್ಲದ್ದರಿಂದ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಐದನೇ ತರಗತಿಯ ಓರ್ವ ವಿದ್ಯಾರ್ಥಿ ತಿಳಿಸಿರುತ್ತಾರೆ.
ಇತ್ತೀಚಿಗಷ್ಟೇ ಹೃದಯಘಾತವಾಗಿ ಸಾವಿನ ಮನೆ ಬಾಗಿಲು ತಟ್ಟಿ ಬಂದ ಓರ್ವ ಮಹಿಳೆ ಹೃದಯಗಾತವಾದಾಗ ನನ್ನನ್ನು ಕರೆದು ಕೊಂಡು ಹೋಗಲು 108 ತಿಳಿಸಿದರೆ ಅವರು ಚಿಪ್ಪಣಿಗೆ ಬರಲು ಆಗುವುದಿಲ್ಲ ಎಂದು ನಮ್ಮ ಮನವಿ ತಿರಸ್ಕರಿಸಿದ್ದಾರೆ ಹೇಗೋ ಊರಿನವರಲ್ಲ ಸೇರಿ ನನ್ನನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ ದಯವಿಟ್ಟು ನಮಗೆ ರಸ್ತೆ ಮಾಡಿಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಾರೆ.
ಇನ್ನೂ ಈ ರಸ್ತೆಯ ಕಥೆಯೇ ಬೇರೆ ಹೊಸೂರು ಗ್ರಾಮ ಪಂಚಾಯಿತಿಯಿಂದ ರಸ್ತೆಯ ಕಾಮಗಾರಿಗಾಗಿ ಸ್ವಲ್ಪ ಹಣವನ್ನು ನೀಡಿದ್ದಾರೆ ಆದರೆ ಆ ಹಣ ಸಾಕಾಗದಿದ್ದಾಗ ನಾಲ್ಕು ಮನೆ ಇರುವ 25ರಿಂದ 30 ಸದಸ್ಯರು ರಸ್ತೆಯನ್ನು ತಾವೇ ನಿಂತು ಸ್ವತಃ ಹಣ ಹಾಕಿ ಮಾಡಿಕೊಂಡಿದ್ದಾರೆ. ಈಗ ಆ ರಸ್ತೆಯನ್ನು ಓಡಾಡದ ಪರಿಸ್ಥಿತಿ ಕಾರಣ ಗುಡ್ಡದ ಮೇಲಿಂದ ಬರುವ ನೀರು ರಸ್ತೆಯ ಮೇಲೆ ಬಾರದಂತೆ ಕಾಲುವೆ ಮಾಡಲಾಗಿತ್ತು ಆದರೆ ಈ ಭಾಗದ ರೈತರು ಒಬ್ಬರು ಕಾಲುವೆ ಯನ್ನು ಮುಚ್ಚಿ ಆ ನೀರು ನೇರವಾಗಿ ರಸ್ತೆ ಮೇಲೆ ಹರಿದು ರಸ್ತೆ ಎಲ್ಲ ಹಾಳಾಗುತ್ತಿದೆ ಹಾಗೂ ಯಾವ ವಾಹನಗಳು ಸಂಚರಿಸಲು ಆಗುತ್ತಿಲ್ಲ ಎಂದು ಹಲವು ಸಾರಿ ಗ್ರಾಮ ಆಡಳಿತಕ್ಕೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡ ಗ್ರಾಮಸ್ಥರು.
ರಾಷ್ಟ್ರೀಯ ಹೆದ್ದಾರಿಯ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಊರೇ ಚಿಪ್ಪಳಿ.ಸಮರ್ಪಕ ರಸ್ತೆ ಇಲ್ಲದೆ ಕಲ್ಲು ಮುಳ್ಳಿನಲ್ಲಿ ಓಡಾಡುತ್ತಿರುವ ಗ್ರಾಮಸ್ಥರು, ಸಮರ್ಪಕ ಚರಂಡಿ ಇಲ್ಲದೆ ಗಬ್ಬು ವಾಸನೆ ಹೊಡೆಯುತ್ತಿರುವ ಗ್ರಾಮ, ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟಿಸುತ್ತಿರುವ ಮಹಿಳೆಯರು ಹೌದು ಹೀಗೊಂದು ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ನವ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಇಲ್ಲಿ ನೂತನವಾಗಿ ನವಗ್ರಾಮವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ನವಗ್ರಾಮದಲ್ಲಿ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ, ಬಾವಿಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದಲ್ಲದೆ ಸಮರ್ಪಕ ರಸ್ತೆವಿಲ್ಲದೆ ಜನರು ಕಲ್ಲು,ಮುಳ್ಳು, ಗಿಡ ಗಂಟೆಗಳಲ್ಲಿ ಓಡಾಡುವ ಶೋಚನೀಯ ಪರಿಸ್ಥಿತಿ ಇವರದಾಗಿದೆ. ಅದಲ್ಲದೆ ಚರಂಡಿಗಳಿಲ್ಲದೆ ನೀರು ಮುಂದಕ್ಕೆ ಹೋಗದೆ ಅಲ್ಲಿಯೇ ನೀರು ನಿಂತು ರೋಗು ರುಜನೆಗಳು ಹರಡುವ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಪ್ರಧಾನಮಂತ್ರಿಯವರು ಮಹತ್ವಾ ಕಾಂಕ್ಷೆಯ ಯೋಜನೆ ಆದ ಜೆಜೆಎಮ್ ಕಾಮಗಾರಿಯು ಮನೆಗಳ ಮುಂದೆ ನಲ್ಲಿಗಳನ್ನು ಕೂಡಿಸಿಲಾಗಿದೆ. ಆದರೆ ನಲ್ಲಿಗಳಿಗೆ ಸರಿಯಾಗಿ ನೀರು ಬರದೆ ಕುಡಿಯುವ ನೀರಿಗಾಗಿ ಇಲ್ಲಿನ ಜನರು ಹೊಳೆ ಹಾಗೂ ಗುಂಡಿ ನೀರನ್ನು ಅವಲಂಬಿಸಿದ್ದಾರೆ.
ಕಳೆದ 50-60 ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೆ ನಾವು ಬಹಳಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯಿತಿನವರು ನಮಗೆ ಇಲ್ಲಿ ಅವಶ್ಯಕತೆ ಇರುವ ಮೂಲ ಭೂತ ಸೌಕರ್ಯಗಳನ್ನು ಒದಗಿಸಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಸ್ಥಳೀಯ ಹಾಗೂ ಎಲ್ಲ ಚುನಾವಣೆಗೂ ಮತದಾನ ಬಹಿಷ್ಕಾರ ಮಾಡಲಾಗುವು ದೆಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಒಟ್ಟಿನಲ್ಲಿ ಚಿಪ್ಪಳಿ ಮೂಲಭೂತ ಸೌಕರ್ಯ ಗಳಿಲ್ಲದೆ, ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸ್ಥಳೀಯ ಶಾಸಕರು ಸಂಸದರು ಗ್ರಾಮ ಪಂಚಾಯತಿಯವರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.
Tags
ಸಾಗರ ಗ್ರಾಮೀಣ ವರದಿ