ಭದ್ರಾವತಿ-ಅ:23 ರಂದು ಇಲ್ಲೆಲ್ಲಾ ಕರೆಂಟ್ ಇರಲ್ಲ: ಎಲ್ಲೆಲ್ಲಿ..?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗದ ಬಿ.ಹೆಚ್.ರಸ್ತೆಯಲ್ಲಿ ರಸ್ತೆ ಅಗಲೀಕರಣ ಹಾಗೂ ಮಾರ್ಗ ನಿರ್ವಹಣೆ ಕಾರ್ಯದ ಸಂಬಂಧವಾಗಿ ವಿದ್ಯುತ್ ಮಾರ್ಗ ತೆರವು ಕಾಮಗಾರಿ ಯನ್ನು ಹಮ್ಮಿಕೊಂಡಿರುವುದರಿಂದ ಘಟಕ-3 ರ ಶಾಖಾ ವ್ಯಾಪ್ತಿ ಹಾಗೂ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಈ ಕೆಳಕಂಡ ಪ್ರದೇಶಗಳಲ್ಲಿ ಅ:23. ಗುರುವಾರ ಬೆಳಿಗ್ಗೆ 10:00 ಘಂಟೆ ಯಿಂದ ಸಂಜೆ 06.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಲೋಯರ್ ಹುತ್ತಾ, ಲೋಯರ್ ಹುತ್ತಾ ಕೈಗಾರಿಕಾ ಪ್ರದೇಶ, ಐ.ಟಿ.ಐ, ಕಡದಕಟ್ಟೆ, ಹೆಬ್ಬಂಡಿ,ಎ.ಕೆ.ಕಾಲೋನಿ, ಲಕ್ಷ್ಮಿಪುರ,ಬಿಳಿಕಿ, ಪದ್ಮನಹಳ್ಳಿ, ಹೊಳೆನೇರಳೆಕೆರೆ, ದೊಣಬಘಟ್ಟ, ತಡಸ ಮುಂತಾದೆಡೆ ವಿದ್ಯುತ್ ಅಡಚಣೆಯಾಗಲಿದ್ದು,ಗ್ರಾಹಕರು ಸಹಕರಿಸಲು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು