ಸೈಲ್‌-ವಿಐಎಸ್‌ಎಲ್‌ನಲ್ಲಿ ಹೃದಯ ತಪಾಸಣಾ ಉಚಿತ ಶಿಬಿರ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ SAIL-VISL ಆಸ್ಪತ್ರೆ ಮತ್ತು ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಬುಧವಾರ ಹೃದಯ ತಪಾಸಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ರಕ್ತದೊತ್ತಡ (ಬಿಪಿ) ತಪಾಸಣೆ, ಜಿ ಆರ್ ಬಿ ಎಸ್ (ಮಧುಮೇಹ) ತಪಾಸಣೆ, 2D ಏಕೋ, ಇಸಿಜಿ ತಪಾಸಣೆ ಮಾಡಲಾಯಿತು. 

ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ: ಭರತ್ ಗೌಡ ಮತ್ತು ಹೃದಯ ತಜ್ಞ ಡಾ:ಎಚ್.ಜೆ.ಶಶಾಂಕ್ ವೈಧ್ಯಕೀಯ ಸಲಹೆ ನೀಡಿದರು.

ಸಹಾಯಕರಾದ ರಂಜಿತ, ವೀಣಾ, ನಿತ್ಯ, ಗಣೇಶ್ ಮತ್ತು ಮಣಿಕಂಠ, ವಿಐಎಎಲ್‌ ಆಸ್ಪತ್ರೆಯ ಅಲೆನ್ ಪಿಂಟೋ, ಪುಷ್ಪಲತಾ, ಪ್ರಕಾಶ್.ಜಿ, ಉಮೇಶ್, ರಮೇಶ್ ಮತ್ತು ಕಿರಿಯ ಅಧಿಕಾರಿ ಎಮ್.ಎಲ್. ಯೋಗೀಶ್, ಸಹಕಾರ ನೀಡಿದರು.

ವಿಐಎಸ್‌ಎಲ್‌ನ ಮಾನವ ಸಂಪನ್ಮೂಲ ಇಲಾಖೆ, ಆಸ್ಪತ್ರೆ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗಳಿಂದ ಶಿಬಿರ ಸಂಯೋಜಿಸಲಾಗಿತ್ತು. 

ವಿಐಎಸ್‌ಎಲ್ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿ ಡಾ:ಸುಜೀತ್ ಕುಮಾರ್ ಮತ್ತು ಹೆಚ್. ಆರ್ ಮತ್ತು ಸಾರ್ವಜನಿಕ ಸಂಪರ್ಕ ಮಹಾ ಪ್ರಬಂಧಕ ಎಲ್. ಪ್ರವೀಣ್ ಕುಮಾರ್ ಕಾರ್ಯಕ್ರಮದ ಆಯೋಜನೆಯ ಮೇಲುಸ್ತುವಾರಿ ವಹಿಸಿದ್ದರು.

159 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಶಿಬಿರದ ಸೌಲಭ್ಯ ಪಡೆದುಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು