ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಅಕ್ರಮ ಕಸಾಯಿ ಖಾನೆಯ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ಶನಿವಾರ ಸಂಜೆ ನಡೆಸಿದ್ದಾರೆ. ದಾಳಿ ನಡೆಸಿದ ಪೊಲೀಸರು ನಾಲ್ಕು ಗೋವುಗಳನ್ನ ರಕ್ಷಿಸಿದ್ದಾರೆ. ಆದರೆ ಆರೋಪಿ ಪರಾರಿಯಾಗಿದ್ದಾನೆ.
ತಾಲ್ಲೂಕಿನ ದೊಣಬಘಟ್ಟದಲ್ಲಿ ನಾಸೀರ್ ಯಾನೆ ಶಕ್ತಿ ಎಂಬಾತ ಗೋಮಾಂಸ ಮಾರಾಟದ ಹಿನ್ನಲೆ ಯಲ್ಲಿ ಬೊಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ನಾಲ್ಕು ಗೋವು ಗಳನ್ನ ತರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸರನ್ನ ಕಂಡ ನಾಸೀರ್ ಓಡಿಹೋಗಿದ್ದಾನೆ. ದಾಳಿಯಲ್ಲಿ ಪೊಲೀಸರನ್ನಕಂಡ ನಾಸೀರ್ ಪರಾರಿಯಾಗಿ ದ್ದಾನೆ. 2-3 ವರ್ಷದ ಎರಡು ಮತ್ತು 4-6 ವರ್ಷದ ಹೋರಿ ಕರುಗಳನ್ನ ಪೊಲೀಸರು ರಕ್ಷಿಸಿದ್ದಾರೆ.