ಸಮುದಾಯ ಭವನ ನಿರ್ಮಾಣ ಅಕ್ರಮ: ಸ್ಪಷ್ಟನೆಗೆ ಶಶಿಕುಮಾರ್ ಗೌಡ ಆಗ್ರಹ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಜನ್ನಾಪುರ ಪಿಲ್ಟರ್‌ಶೆಡ್‌ ನಲ್ಲಿ ಕಾನೂನು ಬಾಹೀರವಾಗಿ 30x80 ಅಳತೆಯ ಸಮುದಾಯ ಭವನ ಕಾನೂನು ಬಾಹಿರವಾಗಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ವಾಗುತ್ತಿದ್ದು, ವಿಐಎಸ್ಎಲ್ ನಗರಾ ಡಳಿತದ ವತಿಯಿಂದ ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ವಿಐಎಸ್ಎಲ್ ನಗರಾಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ನಿವಾಸಿಗಳು ಕಾನೂನು ಬಾಹಿರವಾಗಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದ್ದು, ಈ ಜಾಗಕ್ಕೆ ಸಂಬಂಧಪಟ್ಟಂತೆ ಪಹಣಿ ಯಲ್ಲಿ ವಿಐಎಎಲ್ ಮತ್ತು ಗೋಮಾಳ ಜಾಗ ಎಂದು ನಮೂದಾಗಿರುತ್ತದೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ತಾಲೂಕು ಆಡಳಿತ ಮತ್ತು ವಿಐಎಸ್ಎಲ್ ನಗರಾಡಳಿತ ವತಿಯಿಂದ ಸ್ಥಳ ಪರಿಶೀಲಿಸಿ ಫೆ.28 ರಂದು ಜಂಟಿ ಸರ್ವೆನಡೆಸುವ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ವಿಐಎಸ್‌ಎಲ್ ಕಾರ್ಖಾನೆಯ ಸಿವಿಲ್ ಇಂಜಿನಿಯರ್ ನಂದನ್‌ರವರು ಕಟ್ಟಡ ನಿರ್ಮಾಣವಾಗಿರುವ ಜಾಗ ವಿಐಎಸ್‌ಎಲ್ ಸೇರಿದ್ದು ಎಂದು ಮೌಖಿಕವಾಗಿ ತಿಳಿಸಿರುತ್ತಾರೆಂದು ಆರೋಪಿಸಿದರು.

ವಿಐಎಸ್‌ಎಲ್ ನಗರಾಡಾಳಿತ ಕಛೇರಿ ಯವರು ತಮ್ಮ ವ್ಯಾಪ್ತಿಗೊಳಪಡುವ ಜಾಗಗಳಲ್ಲಿ ವ್ಯಾಪಾರಿಗಳಿಗೆ, ಬಡ ನಾಗರಿಕರಿಗೆ ಸಣ್ಣಪುಟ್ಟ ವ್ಯಾಪಾರ ಮಾಡುವುದಕ್ಕೂ ಕೂಡ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಮಾಡಿ ಮುಗಿಯುವ ಹಂತಕ್ಕೆ ಬಂದರೂ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಯಾವುದೇ ಕ್ರಮ ತೆಗೆದು ಕೊಳ್ಳದೆ ಇರುವುದನ್ನು ಗಮನಿಸಿದಾಗ ನಗರಾಡಳಿತ ಇಲಾಖೆ ಮತ್ತು ನಂದನ್‌ ರವರು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ಜೊತೆ ಶಾಮೀಲಾಗಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕಟ್ಟಡ ನಿರ್ಮಾಣವಾಗಿ ರುವ ಜಾಗದ ಸರ್ವೆ ನಡೆಸಿ ಜಾಗದ ಬಗ್ಗೆ ತಮ್ಮಲ್ಲಿರುವ ದಾಖಲೆಗಳ ಮಾಹಿತಿಯನ್ನು ಲಿಖಿತವಾಗಿ ನೀಡಬೇಕೆಂದು ಒತ್ತಾಯಿಸಿದರು.

ಅಲ್ಲದೆ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ಆಗ್ರಹಿಸಿದರು.

ವಿಐಎಸ್‌ಎಲ್‌ ನಗರಾಡಳಿತಾಧಿಕಾರಿ ನವೀನ್ ರಾಹುಲ್‌ಗೆ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಧರಣಿ ಸತ್ಯಾಗ್ರಹದಲ್ಲಿ ನಿವಾಸಿಗಳಾದ ನಗರಸಭೆ ಸದಸ್ಯೆ ಕೆ.ಆರ್ ಸವಿತಾ, ಮುಖಂಡ ಉಮೇಶ್, ಇಂದ್ರಮ್ಮ, ದಿವ್ಯಶ್ರೀ, ಮುದ್ದಮ್ಮ ಲಕ್ಷ್ಮಮ್ಮ ಸಣ್ಣಕ್ಕ, ಅನುಸೂಯ, ಸಂಧ್ಯಾ, ಮುನಿಯಮ್ಮ, ಮಾಲಕ್ಕ ಯೋಗೇಶ್, ಗೋಪಾಲ ರಾವ್‌ ಇನ್ನಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು