ಹುಣಸಗಿ-ದಸಂಸ ನೂತನ ಸಂಚಾಲಕರಾಗಿ ನಿಂಗಣ್ಣ ಕಟ್ಟಿಮನಿ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 

ಹುಣಸಗಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿ ಯಾದಗಿರಿ ವತಿಯಿಂದ ಹುಣಸಗಿ  ತಾಲೂಕಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. 

ಭಾನುವಾರ ತಾಲೂಕು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ನಿಂಗಣ್ಣ ಎಂ ಗೋನಲ್  ವಹಿಸಿದ್ದರು. ಜಿಲ್ಲಾ ಸಂಘಟನಾ ಸಂಚಾಲಕ HR ಬಡಿಗೇರ್, ದಸಂಸ ಮುಖಂಡರಾದ ಭೀಮಣ್ಣ ಅಡ್ಡಡೊಡಗಿ, ಹನುಮಂತ ದೊಡ್ಡಮನಿ ಉಪಸ್ಥಿತರಿದ್ದರು.

ಹುಣಸಗಿ ತಾಲೂಕಿನ ತಾಲೂಕ ಸಂಚಾಲಕ ರಾಗಿ ನಿಂಗಣ್ಣ ಇವರನ್ನು ನೇಮಕ ಮಾಡಲಾಯಿತು. ಸಂಘಟನಾ ಸಂಚಾಲಕರಾಗಿ ಸುರೇಶ ಕನ್ನಳ್ಳಿ, ಶರಣು  ಶಿವಪ್ಪ,ಮಹಾಂತೇಶ, ರವಿ, ಶಿವಶರಣಪ್ಪ  ಹನುಮಂತ್ರಾಯ ದೊಡ್ಮನೆ , ಶೇಖರ್ ಸುರಪುರ, ಜೆಟ್ಟಪ್ಪ ಹಾದಿಮನಿ ,  ಪರಶುರಾಮ್ ಚಲವಾದಿ,  ಪರಶುರಾಮ್ ಸುರಪುರ,  ಜೆಟ್ಟಪ್ಪ ಕಚಕನೂರ ಇವರುಗಳನ್ನು ಪದಾಧಿಕಾರಿಗಳಾಗಿ  ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿ ಗಳಿಗೆ ಸಂಘಟನೆಯ ಕುರಿತು  ಸಿದ್ಧಾಂತಗಳನ್ನು ಜಿಲ್ಲಾ ಸಂಚಾಲಕರು ವಿವರಿಸಿದರು.

ವರದಿ✍️ ಶಿವು ರಾಠೋಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು