ಮಕ್ಕಳ ಕಲಿಕಾ ನ್ಯೂನತೆ- ವರ್ತನಾ ಸಮಸ್ಯೆಗಳ ಬಗ್ಗೆ ಪೋಷಕರ ಗಮನ ಅಗತ್ಯ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಚಿಕ್ಕಂದಿನಿಂದ ಮಕ್ಕಳಲ್ಲಿ ಕಲಿಕಾ ನ್ಯೂನ್ಯತೆ ಹಾಗೂ ವರ್ತನಾ ಸಮಸ್ಯೆಗಳ ಬಗ್ಗೆ ಪೋಷಕರು ಶಿಕ್ಷಕರು ಹೆಚ್ಚು ಗಮನಹರಿಸುತ್ತಿ ರಬೇಕು ಇದರಿಂದ ಮುಂದೆ ಆಗುವ ದೊಡ್ಡ ಪರಿಣಾಮಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಮೇಘನಾ ಆಸ್ಪತ್ರೆಯ ಮನಶಾಸ್ತ್ರ ಮಾನಸಿಕ ತಜ್ಞ ರೋಗದ ವಿಭಾಗದ ಮುಖ್ಯಸ್ಥ ಡಾ: ರಾಮ್ ಪ್ರಸಾದ್ ಅಭಿಮತ ವ್ಯಕ್ತಪಡಿಸಿದರು.

ಅವರು ರೋಟರಿ ಬ್ಲಡ್ ಬ್ಯಾಂಕ್ ಆವರಣದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಿಟ್ ಟೌನ್ ವತಿಯಿಂದ ಆಯೋಜಿಸಲಾಗಿದ್ದ ಆಟಿಸಂ. ಏಡಿ ಎಚ್ ಡಿ. ಕಲಿಕಾ ನ್ಯೂನ್ಯತೆ ಮತ್ತು ವರ್ತನಾ ಸಮಸ್ಯೆಗಳ ಬಗ್ಗೆ ಪೋಷಕ ರಿಗೆ ಆಯೋಜಿಸಲಾದ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ಅಣುವಂಶಿತಿಯಿಂದ ಪರಿಸರದಿಂದ ಹಾಗೂ ಗರ್ಭಾವಸ್ಥೆಯಲ್ಲಿ ಇದ್ದಾಗ ಆಗುವ ಸಮಸ್ಯೆಗಳಿಂದ ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯಾದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿ ಕೊಳ್ಳುತ್ತವೆ ಇದನ್ನು ಪ್ರಾರ್ಥಮಿಕ ಹಂತದಲ್ಲೇ ಗುರುತು ಹಚ್ಚಿ ಅವರಿಗೆ ನೀಡುವ ತರಪಿಗಳ ಮುಖಾಂತರ ಇದನ್ನು ನಿಯಂತ್ರಿಸ ಬಹುದು ಎಂದು ನುಡಿದರು.

ಹೈದರಾಬಾದ್ ಟೋಟಲ್ ಸೊಲ್ಯೂಷನ್ ಪುನರ್ವಸತಿ ಸೊಸೈಟಿಯ ಪ್ರಖ್ಯಾತ ಮಾನಸಿಕ ತಜ್ಞರಾದ ಡಾ: ಪೂಜಾ ನಾಯರ್ ಮಾತನಾಡುತ್ತಾ ಮಕ್ಕಳು ನಾವು ಹೇಳುವ ವಿಷಯದ ಕಡೆ ಗಮನ ಕೊಡುತ್ತಿಲ್ಲ ಸೂಚನೆಗಳನ್ನು ಪಾಲಿಸು ತ್ತಿಲ್ಲ ಹಾಗೂ ಹೆಸರಿಗೆ ಪ್ರತಿಕ್ರಿಯೆ ನೀಡುತ್ತಾ ಇಲ್ಲ ಹಾಗೂ ಒಂದೇ ಸ್ಥಳದಲ್ಲಿ ಪೂರನು ಕಷ್ಟ ವಾಗುತ್ತಿರುವ ಈ ಸಮಸ್ಯೆ ಗಳನ್ನು ಗುರುತು ಹಚ್ಚಿ ಕೂಡಲೇ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಇತ್ತೀಚಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮಕ್ಕಳಲ್ಲಿ ತುಂಬಾ ಕಾಡುತ್ತಿವೆ ಎಂದು ನುಡಿದರು. 

ಮಕ್ಕಳ ಮಾನಸಿಕ ತಜ್ಞ ಸಂಸ್ಥೆಯ ಉಪಾಧ್ಯಕ್ಷ ರಾದ ಸುಮಾ ಸಿಂಗ್ ಮಾತನಾಡುತ್ತಾ ಈಗಾಗಲೇ ಹೈದರಾಬಾದಿನಲ್ಲಿ 11 ಸೆಂಟರ್ ಗಳಲ್ಲಿ ಈ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಾ ಇದ್ದೇವೆ ಆದ್ದರಿಂದ ಇಂದು ಪೋಷಕರಿಗೆ ಹಾಗೂ ವೈದ್ಯರಿಗೆ ಇದರ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದಾಗ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದರು.

ರೋಟರಿ ಕ್ಲಬ್ ಮಿಟ್ ಟೌನ್ ನ ಅಧ್ಯಕ್ಷ ಸುರೇಶ್ ದುರ್ಗಪ್ಪ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ.ವಿಜಯಕುಮಾರ್. ಮಾಜಿ ಅಧ್ಯಕ್ಷರು ಹಾಗೂ ಯೋಜನಾ ನಿರ್ದೇಶಕಿ. ರೋ ವೀಣಾ ಸುರೇಶ್. ಮಾನಸಿಕ ತಜ್ಞ ಡಾಕ್ಟರ್ ಎಸ್ ಟಿ ಅರವಿಂದ್ ಕಾರ್ಯದರ್ಶಿ ಪಹಿಂ ಹುಸೇನ್. ಸಹಕಾರದ ಶ್ರೀ ಕೆವಿಎಲ್ ರಾಜು ಉಪಸ್ಥಿತರಿದ್ದರು. ಕಾರ್ಯಗಾರಕ್ಕೆ ವಿವಿಧ ಜಿಲ್ಲೆಗಳಿಂದ ಪೋಷಕರುಗಳು ಆಗಮಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು