ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲೂಕಿನ ತಡಸ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತ್ತಿಘಟ್ಟ ಗ್ರಾಮಸ್ಥರು ಕುಡಿಯುವ ನೀರು ಸರಬ ರಾಜು ಮಾಡಬೇಕೆಂದು ಒತ್ತಾಯಿಸಿ, ತಡಸ ಗ್ರಾ ಪಂ ಕಚೇರಿ ಎದುರು ಸೋಮವಾರ ಅಂಬೇಡ್ಕರ್ ವೈಚಾರಿಕಾ ವೇದಿಕೆ ಕರ್ನಾಟಕ (ಎವೈವಿಕೆ) ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ವೇದಿಕೆ ಸಂಚಾಲಕ ಪಿ.ಮೂರ್ತಿ ಮಾತ ನಾಡಿ, ಗ್ರಾಮದಲ್ಲಿ ವಿವಿಧ ಸಮು ದಾಯ ಗಳಿಗೆ ಸೇರಿದ ಬೀದಿಗಳಿದ್ದು. ದಿನಕ್ಕೆ ಒಂದು ಬೀದಿಗೆ ಸರದಿಯಂತೆ ವಾರದಲ್ಲಿ ಒಂದು ದಿನ ನೀರು ಸರಬ ರಾಜು ಮಾಡಲಾಗುತ್ತಿದೆ. ಜನರು ನೀರನ್ನು 6-7 ದಿನ ಶೇಖರಿಸಿಟ್ಟು ಕೊಂಡು ಕುಡಿಯುತ್ತಿದ್ದಾರೆ.ವಾರಗಟ್ಟಲೆ ಶೇಖರಿಸಿಟ್ಟು ಕೊಂಡ ನೀರನ್ನು ಕುಡಿಯುವು ದರಿಂದ ಜನರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಡೆಂಗ್ಯೂ, ಮಲೇರಿಯಾ. ಚಿಕನ್-ಗುನ್ಯಾ ದಂತಹ ರೋಗಗಳು ಹರಡುತ್ತಿವೆ ಎಂದು ಕಿಡಿ ಕಾರಿದರು.
ಗ್ರಾಮದಲ್ಲಿ ಸುಮಾರು 200 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಗ್ರಾಮದಲ್ಲಿ ರುವ ಎರಡು ಬೋರ್ವೆಲ್ ಗಳಲ್ಲಿ ಅಂತರ್ಜಲ ತುಂಬಿದೆ. ಸುಮಾರು ಲಕ್ಷ ಗ್ಯಾಲನ್ ಲೀಟರ್ ನೀರಿನ ಒವರ್ಹೆಡ್ ಟ್ಯಾಂಕ್ನ ವ್ಯವಸ್ಥೆ ಕೂಡ ಇದೆ. ಗ್ರಾಮದ ಕೂಗಳತೆ ದೂರ ದಲ್ಲಿ ಭದ್ರಾನದಿ ಇದ್ದರೂ ಗ್ರಾಮದ ಜನರಿಗೆ ಕುಡಿಯುವ ನೀರಿಲ್ಲದಿ ರುವುದು ದುರಂತ. ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ವೇದಿಕೆ ಮುಖಂಡ ಮುನಿರಾಜು ಮಾತನಾಡಿ, ಗ್ರಾಮಕ್ಕೆ ನೀರಿನ ವ್ಯವಸ್ಥೆ ಇದ್ದರೂ ಸರಬರಾಜು ಮಾಡುವ ವ್ಯವಸ್ಥೆ ಸರಿಯಿಲ್ಲ. ಪಂಚಾಯಿತಿ ಅಧಿಕಾರಿಗಳು ಅದರತ್ತ ಗಮನಹರಿ ಸುತ್ತಿಲ್ಲ. ಗ್ರಾಮದ ನೀರುಗಂಟಿ ನಿರ್ಲಕ್ಷ ದಿಂದ ಇದ್ದಾರೆ. ಗ್ರಾಮದ ಎಲ್ಲಾ ಬೀದಿಗಳಿಗೂ ಪ್ರತಿದಿನ ಒಂದು ಬೀದಿಗೆ ಅರ್ಧ ಗಂಟೆಯಂತೆ ನೀರು ಸರಬ ರಾಜು ಮಾಡಿದರೆ ಜನರಿಗೆ ಅನು ಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ
ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ಮತ್ತಿಘಟ್ಟ ಗ್ರಾಮ ದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ವರ್ಗಾವಣೆಯಾಗಿ ಬಂದು ಎರಡು ತಿಂಗಳಾಯಿತು, ಕೂಡಲೇ ಮತ್ತಿಘಟ್ಟ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಚಂದ್ರಪ್ಪ, ರಮೇಶ್, ರವಿಕುಮಾರ್, ರಂಗರಾವ್, ವೆಂಕಟೇಶ್, ದಯಾನಂದ ಸಂಜಯ್ ಹಾಗೂ ಗ್ರಾಮಸ್ಥರು ಇದ್ದರು.
Tags
ಭದ್ರಾವತಿ ಪ್ರತಿಭಟನೆ