ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಮನುಕುಲದ ಸೇವೆಯ ಮುಂಚೂಣಿಯಲ್ಲಿ ಸಂಸ್ಥೆ ರೋಟರಿ. ವಿಶ್ವಾದ್ಯಂತ 206 ದೇಶಗಳಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೇ ಸೇವಾ ಕಾರ್ಯ ಗಳನ್ನು ನಡೆಸುತ್ತಿದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಸಾರಥ್ಯದಲ್ಲಿ ನಗರದ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ರೋಟರಿ ದತ್ತಿನಿಧಿ ಮತ್ತು ಪೊಲಿಯೋ ಪ್ಲಸ್ ಕುರಿತ ಸಮೃದ್ಧಿ 2025 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೋಟರಿ ಫೌಂಡೇಷನ್ಗೆ ನೀಡಿದ ದೇಣಿಗೆಯು ವಿಶ್ವದ ಮನುಕುಲದ ಸೇವೆಗೆ ವಿನಿಯೋಗಿಸಲಾಗುತ್ತದೆ. ಪಾರದರ್ಶಕತೆ ಯಿಂದ ಹಣದ ಉಪಯೋಗ ಮಾಡಲಾ ಗುತ್ತದೆ. ದೇಣಿಗೆ ನೀಡಿದ ಹಣ ಕೆಲ ವರ್ಷ ಗಳಲ್ಲಿ ಪುನಃ ಸಮುದಾಯ ಯೋಜನೆ ಗಳಿಗೆ ಸಿಗುತ್ತದೆ. ರೋಟರಿ ಫೌಂಡೇಷನ್ಗೆ ಕೋಟ್ಯಂತರ ರೂ. ದೇಣಿಗೆ ನೀಡಲಾಗಿದೆ ಎಂದು ತಿಳಿಸಿದರು.
ಬಡತನದಲ್ಲಿರುವ ಸಮುದಾಯದ ಮಕ್ಕಳ ವಿದ್ಯಾಭ್ಯಾಸ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ದೇಣಿಗೆ ಬಳಸಲಾ ಗುತ್ತಿದೆ. ಸಿದ್ದಾರ್ಥ ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿ 45 ಲಕ್ಷ ರೂ. ಹೊಂದಿಸಲಾಗಿದೆ ಎಂದು ಹೇಳಿದರು.
ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ 100 ಕೋಟಿ ರೂ. ದೇಣಿಗೆ ನೀಡಿದ್ದು, ಪ್ರಸ್ತುತ ವಾಸದ ಮನೆ ಹೊಂದಿದ್ದೇನೆ. ಈವರೆಗೂ ಗಳಿಸಿದ ಹಣವನ್ನು ಉತ್ತಮ ಉದ್ದೇಶಕ್ಕೆ ನೀಡಿದ್ದೇನೆ ಎಂದರು.
ರೋಟರಿ 3182ರ ಜಿಲ್ಲೆಯಿಂದ ಸಮುದಾಯ ಸೇವೆಗೆ 5 ಕೋಟಿ ರೂ. ನೀಡುವ ಸಂಕಲ್ಪ ಮಾಡಿದ್ದು, ಈವರೆಗೂ ಸಂಗ್ರಹವಾದ 1 ಕೋಟಿ ರೂ.ವರೆಗೆ ದೇಣಿಗೆ ನೀಡಿದ ರೋಟರಿ ಸದಸ್ಯರನ್ನು ಸನ್ಮಾನಿಸಲಾಯಿತು.
ರೋಟರಿ ಜಿಲ್ಲೆ 3182ರ ವ್ಯಾಪ್ತಿಯ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಭಾಗದ 700ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.
ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ, ಸಮಾವೇಶದ ಅಧ್ಯಕ್ಷ ಚಂದ್ರಹಾಸ್ ಪಿ ರಾಯ್ಕರ್, ಮಾಜಿ ಜಿಲ್ಲಾ ಗವರ್ನರ್ ಸಾಂಬಶಿವ ರಾವ್ ಪತಿಬಂದ್ಲ, ಡಾ. ನಾರಾಯಣ್, ಡಾ. ವಿನಯಕುಮಾರ್, ರಾಜಾರಾಮ್ ಭಟ್ ಬಿ, ಡಿ.ಎಸ್.ರವಿ, ಬಿ.ಎನ್.ರಮೇಶ್, ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ. ಭಟ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿ ದಾರ್, ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣಗೌಡ ಬಿ, ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಪ್ರಮೋಷನ್ ಚೇರ್ಮನ್ ಜಿ.ವಿಜಯ ಕುಮಾರ್, ರೇಖಾ ಪಾಲಾಕ್ಷ, ಪದ್ಮಿನಿ ವಸಂತ ಇದ್ದರು.