ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ದಾರವಾಡ ಜಿಲ್ಲೆ ಇನಾಂ ವೀರಾಪುರದಲ್ಲಿ ಮಾನ್ಯ ಎಂಬ ಹೆಣ್ಣು ಮಗಳು ದಲಿತ ಹುಡುಗನನ್ನು ಮದುವೆ ಆದಳು ಎಂಬ ಕಾರಣಕ್ಕಾಗಿ ತಂದೆಯೇ ಗರ್ಭಿಣಿ ಮಗಳನ್ನು ಬರ್ಬರವಾಗಿ ಹತ್ಯೆಗೈದದ್ದನ್ನು ಅಂಬೇಡ್ಕರ್ ವೈಚಾರಿಕ ವೇದಿಕೆ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ಹೇಳಿಕೆಯಲ್ಲಿ ಒತ್ತಾಯಿಸಿ ರುವ ವೇದಿಕೆಯ ಮುಖಂಡರು ಲಿಂಗಾಯಿತ ಜಾತಿಗೆ ಸೇರಿದ ಯುವತಿ ದಲಿತ ಜಾತಿಯ ಯುವಕನನ್ನು ವಿವಾಹವಾಗಿ 7 ತಿಂಗಳು ಗರ್ಭಿಣಿ ಯನ್ನು ಹೆತ್ತ ತಂದೆಯೇ ಕೊಡಲಿ ಯಿಂದ ಕೊಚ್ಚಿ ಕೊಲೆಮಾಡಿರುವುದು ಹಾಗೆ, ಬಿಜಾಪುರದಲ್ಲಿ ದೇವಸ್ಥಾನ ಕಟ್ಟೆಯ ಮೇಲೆ ಮೇಲ್ಜಾತಿಯವರ ಸಮನಾಗಿ ಒಬ್ಬ ದಲಿತ ಯುವಕ ಕುಳಿತ ಎಂದು ಕೊಲೆ ಮಾಡಲಾ ಗಿರುವುದು ಖಂಡಿಸಿದ್ದಾರೆ.
ಈ ಎರಡೂ ಘಟನೆಗಳು ವರ್ಣಾಶ್ರಮ ಜಾತಿ ವ್ಯವಸ್ಥೆ ಜೀವಂತವಾಗಿರುವುದಕ್ಕೆ ಸಾಕ್ಷಿ. ಇನಾಂವೀರಾಪುರದ ಮೇಲ್ಮಾತಿಗೆ ಸೇರಿದ ಮಾನ್ಯ ಅದೇ ಗ್ರಾಮದ ದಲಿತ ಹುಡುಗ ವಿವೇಕಾನಂದ ದೊಡ್ಮನಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದರು. ದಲಿತ ಹುಡುಗನನ್ನು ಮಗಳು ಮದುವೆಯಾದ ಕಾರಣಕ್ಕಾಗಿ ಮರ್ಯಾದೇ ಹೋಯಿತೆಂದು ಮೇಲ್ಜಾತಿಯ ದುರಹಂಕಾರದಿಂದ ಪ್ರಕಾಶ್ ಪಾಟೀಲ್ ಮತ್ತವರ ಗುಂಪು ಮಾನ್ಯಳನ್ನು ಕೊಚ್ಚಿ ಕೊಲೆಗೈದಿದೆ. ಮಾನ್ಯಳ ಪತಿ ವಿವೇಕಾನಂದ ದೊಡ್ಮನಿ, ತಂದೆ, ತಾಯಿ, ಸಂಬಂಧಿಕರ ಮೇಲೆಯು ಮಾರಣಾಂತಿಕ ಹಲ್ಲೆ ನಡೆಸಿದೆ.
ಮಾನ್ಯಳ ವಿವಾಹದ ನಂತರ ಗದ್ದಲವಾಗ ಬಹುದೆಂಬ ಕಾರಣಕ್ಕಾಗಿ ಪೊಲೀಸ್ ಠಾಣೆಯಲ್ಲಿ ಸಂಧಾನದ ಚರ್ಚೆ ನಡೆದಿತ್ತು ಎನ್ನಲಾಗುತ್ತಿದೆ. ಜಾತಿವಾದಿಗಳು ಹೆತ್ತಮಗಳೆಂಬ ಕರುಣೆ ಇಲ್ಲದೆ ಪೊಲೀಸ್ ಕಾನೂನು ಎಂಬ ಭಯಭೀತಿ ಇಲ್ಲದೆ. ಗುಂಡಾಗಳಂತೆ ವರ್ತಿಸಿದ್ದಾರೆ. ಸಮಾಜದಲ್ಲಿ ಜಾತಿ ತಾರತಮ್ಮ, ಇನ್ನೂ ಗಾಡವಾಗಿರುವು ದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಈ ದುರ್ಘಟನೆ ಕರ್ನಾಟಕದ ಮಾನವಂತರ ಮನ ಕಲುಕಿದೆ. 'ಹಿಂದೂ ನಾವೆಲ್ಲ ಒಂದು' ಎನ್ನುವ ಹಿಂದತ್ವವಾದಿಗಳು ಈ ಘಟನೆಗೂ ತಮಗೂ ಸಂಬಂಧವಿಲ್ಲ ಎನ್ನುವಂತಿದ್ದಾರೆ. ಆದರೆ ಬುದ್ಧ ಬಸವ, ಅಂಬೇಡ್ಕರ್ ವಾದಿಗಳು ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಹೋರಾಟ ಮತ್ತಷ್ಟು ಚುರುಕುಗೊಳ್ಳಬೇಕು. ಮರ್ಯಾದೆ ಹತ್ಯೆ ನಡೆಸಿದ ಅರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ಅಂಬೇಡ್ಕರ್ ವೈಚಾರಿಕಾ ವೇದಿಕೆಯ ಸಂಚಾಲಕರುಗಳಾದ ಪಿ. ಮೂರ್ತಿ, ಜಯರಾಮ್ ಒತ್ತಾಯಿಸಿದ್ದಾರೆ.