ಭದ್ರಾವತಿ-ದೆವ್ವ ಬಿಡಿಸುವುದಾಗಿ ಮಹಿಳೆಗೆ ಥಳಿತ: ಮಹಿಳೆ ಸಾವು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ದೆವ್ವ ಬಿಡುಸುವುದಾಗಿ ಹೇಳಿ ಮಹಿಳೆಯೊಬ್ಬರನ್ನು ಥಳಿಸಿ ಕೊಂದಿರುವ ಘಟನೆ ಸಮೀಪದ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. 

ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (45) ಮೃತೆ. ಭಾನುವಾರ ರಾತ್ರಿ 9-30ಕ್ಕೆ ಮೃತೆ ಗೀತಮ್ಮನ ಮನೆಗೆ ಬಂದ ಆಶಾ ಎಂಬ ಮಹಿಳೆ ಮಂಕಾಗಿದ್ದ ಗೀತಮ್ಮಳಿಗೆ ದೆವ್ವ ಹಿಡಿದಿದೆ, ಅದನ್ನು ಬಿಡಿಸುವುದಾಗಿ ಗೀತಮ್ಮಳ ಮಗನ ಹತ್ತಿರ ಹೇಳಿದ್ದಾಳೆ. ಆಗ ಮಗ ಸಂಜಯ್ ತನ್ನ ತಾಯಿ ಚನ್ನಾಗಿ ಆಗಿ ಲವಲವಿಕೆಯಿಂದ ಇದ್ದರೆ ಸಾಕು ಎಂದು ನಂಬಿ ಆಶಾಳ ಮಾತಿಗೆ ಒಪ್ಪಿಕೊಂಡು ದೆವ್ವ ಬಿಡಿಸಲು ಒಪ್ಪಿ ಕೊಂಡಿದ್ದಾನೆ. ನಂತರ ಆಶಾ ನನ್ನ ಮೇಲೆ ಚೌಡಮ್ಮ ಬಂದಿದೆ ಎಂದು ಗೀತಮ್ಮಳ ಮೇಲಿನ ದೆವ್ವ ಬಿಟ್ಟು ಹೋಗು ಎಂದು ಕೋಲಿನಿಂದ ಹೊಡೆಯಲು ಆರಂಭಿಸಿದ್ದಾಳೆ. ಆದರೂ ದೆವ್ವ ಹೋಗಿಲ್ಲ ಎಂದು ರಾತ್ರಿ 9-30ಕ್ಕೆ ಮನೆಯಿಂದ ಎರಡೂವರೆ ಕಿಲೋಮೀಟರ್ ದೂರವಿರುವ ಹಳೇ ಜಂಭರಘಟ್ಟೆ ಚೌಡಮ್ಮನ ದೇವಸ್ಥಾನದ ವರೆಗೂ ಹೊಡೆದು ಕೊಂಡು ಹೋಗಿದ್ದಾಳೆ. ಆದರೂ ದೆವ್ವ ಬಿಟ್ಟಿಲ್ಲ ಎಂದು ಬೆಳಗಿನ ಜಾವ 2-30 ರ ವರೆಗೂ ಥಳಿಸುವುದನ್ನು ಬಿಟ್ಟಿಲ್ಲ. 

ಆಶಾಳಿಗೆ ಕಳೆದ ಹದಿನೈದು ದಿನ ದಿಂದ ಗ್ರಾಮದ ದೇವರೊಂದು ಮೈ ಮೇಲೆ ಬರುತ್ತಿದೆ ಎನ್ನಲಾಗುತ್ತಿದೆ. ಆಶಾ ಗೀತಾಳ ಮೈಯಲ್ಲಿ ಆತ್ಮವೊಂದು ಹೊಕ್ಕಿದೆ. ಪೂಜೆ ಮಾಡಿ ಆತ್ಮವನ್ನು ಹೋರ ಹಾಕುವುದಾಗಿ ಗೀತಮ್ಮನ ಮಗ ಸಂಜಯ್‍ಗೆ ತಿಳಿಸಿದ್ದಾರೆ. 

ಗೀತಮ್ಮನ ಮನೆಯ ಮುಂಭಾಗದಲ್ಲಿ ಪೂಜೆ ಮಾಡಿದ್ದಾರೆ. ಪೂಜೆ ಮಾಡುತ್ತಿ ದಂತೆ ಗೀತಮ್ಮನ ಮೇಲೆ ದೇವ್ವ ಬಂದಿದೆ ಎನ್ನಲಾಗುತ್ತಿದು ಗೀತಮ್ಮನ ತಲೆ ಮೇಲೆ ಕಲ್ಲು ಹೊರಿಸಿಕೊಂಡು ಮನೆಯಿಂದ ಜಂಬರಗಟ್ಟೆ ಹೊರಗಿನ ಮರವೊಂದರ ಕೆಳಗೆ ಕರೆದು ಕೊಂಡು ಹೋಗಿದ್ದಾರೆ. ಪೂಜೆ ಮಾಡಿದ ಕೆಲ ಹೊತ್ತಿನಲ್ಲೆ ಗೀತಮ್ಮ ಮೈ ಮೇಲೆ ದೆವ್ವ ಬಂದವರಂತೆ ಕೂಗಾಡಲು ಶುರು ಮಾಡಿದ್ದಾರೆ. ಅಷ್ಟರಲ್ಲೆ ಆಶಾಳ ಮೈ ಮೇಲೂ ದೇವರು ಬಂದಿದೆ ಎನ್ನಲಾಗುತ್ತಿದೆ. ಆಶಾ ಗೀತಮ್ಮರಿಬ್ಬರ ಕೂಗಾಟ ಜೋರಾಗಿದೆ. ಶಬ್ದ ಕೇಳಿ ಕೆಲವರು ಸ್ಥಳಕ್ಕೆ ಬಂದು ಇಬ್ಬರ ಕೂಗಾಟ ರಂಪಾಟದ ವಿಡಿಯೋ ಮಾಡಿಕೊಂಡಿದ್ದಾರೆ. 

ಜನ ಸೇರುತ್ತಿದಂತೆ ದೇವರು ಬಂದ ಆಶಾ ವಿಡಿಯೋ ಮಾಡುತ್ತಿದ ಕೆಲವರನ್ನು ವಾಪಸ್ ಕಳಿಸಿ ಪೂಜೆ ಮುಂದುವರೆಸಿದ್ದಾರೆ. ಅಲ್ಲೆ ಇದ್ದ ಮರದ ಟೊಂಗೆಯೊಂದನ್ನು ಕಿತ್ತುಕೊಂಡ ಆಶಾ ಗೀತಮ್ಮಗೆ ತಳಿಸಲು ಶುರು ಮಾಡಿದ್ದಾರೆ. ನಾನು ಹೋಗುವುದಿಲ್ಲ ಎಂದು ಹಠ ಮಾಡುತ್ತಿದ ಗೀತಮ್ಮನ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲು ಹೊರಿಸಿ ಕಾಲುವೆ ಯಲ್ಲಿದ ತಣ್ಣಿರೆರಚಿದ್ದಾರೆ. ಚಳಿ ತಳಾಲಾಗದೆ ನಡುಗುತ್ತಿದ ಗೀತಮ್ಮ ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ. ಗೀತಮ್ಮನ ಮೈಯಲ್ಲಿದ ಆತ್ಮ ಹೋರ ಹೋಗಿದೆ ಇನ್ನೂ ಮುಂದೆ ಯಾವುದೇ ತೊಂದರೆ ಇಲ್ಲ ಎಲ್ಲವೂ ಸರಿಯಾಗಿದೆ ಎಂದು ಗೀತಮ್ಮನನ್ನು ಆಶಾ ಮನೆಗೆ ಕಳಿಸಿದ್ದಾರೆ. ನಡೆಯಲಾಗದೆ ತೀರ್ವ ಅಸ್ವಸ್ಥವಾಗಿದ ಗೀತಮ್ಮನನ್ನು ಹೊಳೆ ಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗೀತಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ದೃಡ ಪಡಿಸಿದ್ದಾರೆ.

 ಮೃತೆ ಗೀತಮ್ಮಳಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ದೇವರು ಬಂದ ಮಹಿಳೆ ದೆವ್ವ ಬಿಡುಸುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಕತ್ ವೈರಲ್ ಹಾಗಿದೆ. ಸ್ಥಳೀಯ ಮುಖಂಡರು ರಾಜಿ ಪಂಚಾಯಿತಿ ನಡೆಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಮೃತೆ ಮಗ ಸಂಜಯ್ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಬೇಟಿ ನೀಡಿದ್ದಾರೆ. ಆರೋಪಿ ಆಶಾಳನ್ನು ಹೊಳೆ ಹೊನ್ನೂರು ಪೊಲೀಸರು ಬಂದಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು