ಭದ್ರಾವತಿ-ಹಣಕಾಸಿನ ವಿಚಾರ ಮಾರಕಾಸ್ತ್ರಗಳಿಂದ ಓರ್ವನ ಮೇಲೆ ದಾಳಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹಣಕಾಸು ವಿಚಾರಕ್ಕೆ ಗಲಾಟೆ ಯಾಗಿ ಸಾಲ ನೀಡಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ತಾಲೂಕಿನ ಮೂಡಲ ವಿಠಲಾಪುರದಲ್ಲಿ ಸೈಯ್ಯದ್ ತೌಫಿಕ್ ಅಲಿಯಾಸ್ ಚೋಟು ಮೇಲೆ ಲಾಂಗ್, ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.  

ಫಯಾದ್ ಮತ್ತು ಗ್ಯಾಂಗ್ ನಿಂದ ಸೈಯ್ಯದ್ ತೌಫಿಕ್ ಮೇಲೆ ದಾಳಿ ನಡೆದಿದೆ. ಹೋಟೆಲ್ ನಲ್ಲಿ ಸೈಯದ್ ತಿಂಡಿ ತಿನ್ನುತ್ತಿದ್ದ ವೇಳೆ ದಾಳಿ ನಡೆಸ ಲಾಗಿದೆ. ಸೈಯದ್ ಗೆ ಫಯಾದ್ ಒಂದೂವರೆ ಲಕ್ಷ ರೂಪಾಯಿ ಹಣ ನೀಡಬೇಕಿತ್ತು. ಹಣದ ವಿಚಾರವಾಗಿ ನಿನ್ನೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಸಯ್ಯದ್ ಗೆ ಗಂಭೀರ ಗಾಯಗಳಾ ಗಿದ್ದು, ಶಿವಮೊಗ್ಗದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ ನಲ್ಲಿ ಬಂದು ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಯಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು