ಭದ್ರಾವತಿ: ಅಡಕೆ ಖೇಣಿ ಮಾಡುವ ಖೇಣಿ ಮನೆಯಲ್ಲಿ ಸಂಗ್ರಹಿಸಿಡ ಲಾಗಿದ್ದ ಲಕ್ಷಾಂತರ ರೂ,ಮೌಲ್ಯದ ಅಡಕೆ ಚೀಲ ಕಳವು ಮಾಡಿರುವ ಘಟನೆ ನಡೆದಿದ್ದು, ತಡವಾಗಿ ದೂರು ದಾಖಲಾಗಿದೆ.
ಭದ್ರಾಕಾಲೋನಿ ಸಮೀಪದ, ಕಣಕಟ್ಟೆಯ ಡಿ.ಕೆ ಪ್ರಹ್ಲಾದ ಅವರ ಸಾಗರ್ನರ್ಸರಿ ಯಲ್ಲಿ ಅಡಕೆ ಚೀಲಗಳನ್ನು ಕಳವು ಮಾಡಲಾಗಿದೆ. ಮನೆಯ ಕಾಂಪೌಂಡ್ ನ ಒಳಭಾಗ ದಲ್ಲಿಯೇ ಸಾಗರ್ ನರ್ಸರಿ ಹೆಸರಿನ ಅಡಕೆ ಖೇಣಿ ಮಾಡುವ ಖೇಣಿ ಮನೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಸಾಲಿನ ಅಡಿಕೆ ಖೇಣಿಯನ್ನು ಫೆಬ್ರವರಿ ಮೊದಲ ವಾರದಲ್ಲಿ ಮುಗಿಸಿದ್ದು, ಎಲ್ಲಾ ಅಡಕೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಾಕಿದ್ದು, ಉಳಿದ ಸ್ವಲ್ಪ ಪ್ರಮಾಣದ ಗೊರಬಲು ಅಡಿಕೆ, ರಾಶಿ ಇಡಿ ಅಡಿಕೆ, ಚಾಲಿ ಮತ್ತು ಸೆಕೆಂಡ್ ಕ್ಯಾಲಿಟಿ ಅಡಕೆಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಅಡಕೆ ಖೇಣಿ ಮನೆಯ ಒಳಭಾಗದ ಗೋಡೆಯ బళి ಜೋಡಿಸಿದ್ದರು ಎನ್ನಲಾಗಿದೆ.
ಫೆ.2ರಂದು ಪ್ರಹ್ಲಾದ ಅವರ ತಾಯಿ ಯವ ಯವರು ನಿಧನ ಹೊಂದಿದ್ದು, ಈ ಹಿನ್ನೆಲೆ ಯಲ್ಲಿ ಕೆಲವು ದಿನಗಳವರೆಗೆ ಖೇಣಿ ಮನೆಗೆ ಹೋಗಿರುವುದಿಲ್ಲ. ಅಡಕೆ ಮಾರಾಟ ಮಾಡುವ ಉದ್ದೇಶ ದಿಂದ ಮಾ.3ರಂದು ಖೇಣಿ ಮನೆಗೆ ಹೋಗಿ ನೋಡಿದಾಗ ಅಡಕೆ ಮೂಟೆ ಗಳು ಕಡಿಮೆ ಇರುವುದು ಕಂಡು ಬಂದಿರುತ್ತದೆ. ಎಣಿಸಿ ನೋಡಿದಾಗ ಮೂಟೆ ಗಳಲ್ಲಿ ತಲಾ 60ಕೆಜಿ ತೂಕದ ಒಟ್ಟು 80,000ರು. ಮೌಲ್ಯದ ಒಟ್ಟು 4ಕ್ವಿಂಟಾಲ್ 20ಕೆಜಿ ತೂಕದ 7 ಚೀಲ ಗೊರಬಲು ಅಡಕೆ. ಒಟ್ಟು 1,87,000 ರು. ಮೌಲ್ಯದ ತಲಾ 75 ಕೆಜಿ ತೂಕದ 5 ಚೀಲ ರಾಶಿ ಇಡಿ ಅಡಕೆ. ಒಟ್ಟು 67,500 ರು. ಮೌಲ್ಯದ ತಲಾ 75 ಕೆಜಿ ತೂಕದ 5 ಚೀಲ ಚಾಲಿ ಅಡಕೆ ಹಾಗೂ ಒಟ್ಟು 82,500 ರು. ಮೌಲ್ಯದ ತಲಾ 75 ಕೆಜಿ ತೂಕದ 5 ಚೀಲ ಒಟ್ಟು ತೂಕ 3 ಕ್ವಿಂಟಾಲ್ 75 ಕೆಜಿ ಸೆಕೆಂಡ್ ಕ್ಯಾಲಿಟಿ ಅಡಕೆ ಕಳವು ಮಾಡಿರು ವುದು ತಿಳಿದು ಬಂದಿದೆ.
ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಒಟ್ಟು 4,17,000 ರು. ಮೌಲ್ಯದ ಒಟ್ಟು 15 ಕ್ವಿಂಟಾಲ್ 45 ಕೆಜಿ ತೂಕದ 22ಅಡಕೆ ಚೀಲ ಕಳವು ಮಾಡಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.